HEALTH TIPS

ಇಂದಿನಿಂದ ಜಿಲ್ಲೆಯಲ್ಲಿ'ಸಾಗರ ಪರಿಕ್ರಮ ಯಾತ್ರೆ'-ಕೇಂದ್ರ ಸಚಿವ ಪಶೋತ್ತಮ ರೂಪಾಲಾ ಉದ್ಘಾಟನೆ

 


          ಕಾಸರಗೋಡು: ಕೇಂದ್ರ, ರಾಜ್ಯ ಸಚಿವರು, ಹಿರಿಯ ಅಧಿಕಾರಿಗಳು, ಮೀನುಗಾರರು, ಕರಾವಳಿ ನಿವಾಸಿಗಳು ಮತ್ತು ಇತರ ಪಾಲುದಾರರೊಂದಿಗೆ ಸಂವಾದ ನಡೆಸುವ ಸಾಗರ ಪರಿಕ್ರಮ ಯಾತ್ರೆಯ ಏಳನೇ ಹಂತ'ಕರಾವಳಿ ಪ್ರವಾಸ ಕಾರ್ಯಕ್ರಮ' ಜೂನ್ 8 ರಂದು ಜಿಲ್ಲೆಯಲ್ಲಿ ನಡೆಯಲಿದೆ.

             ಕಾಸರಗೋಡು ನಗರಸಭೆ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಫಲಾನುಭವಿಗಳ ಸಭೆಯನ್ನು ಕೇಂದ್ರ ಮೀನುಗಾರಿಕೆ, ಪಶುಸಂಗೋಪನಾ ಖಾತೆ  ಸಚಿವ ಪರ್ಶೋತ್ತಮ್ ರೂಪಾಲಾ ಉದ್ಘಾಟಿಸುವರು. ರಾಜ್ಯ ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ಖಾತೆ ಸಚಿವ ಸಜಿ ಚೆರಿಯನ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಮೀನುಗಾರಿಕೆ ರಾಜ್ಯ ಸಚಿವ ಡಾ.ಎಲ್.ಮುರುಗನ್, ಸಂಸದ ರಾಜಮೋಹನ್ ಉಣ್ಣಿತ್ತಾನ್, ಎನ್.ಎ.ನೆಲ್ಲಿಕುನ್ನು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇಭಾಶೇಖರ್ ವಿಶೇಷ ಅತಿಥಿಗಳಾಗಿ ಆಗಮಿಸುವರು.

          ಜಿಲ್ಲಾ ಸಾಗರ ಪರಿಕ್ರಮ ಯಾತ್ರೆಯು ಜೂನ್ 8 ರಂದು ಕಾಸರಗೋಡಿನ ಮಡಕ್ಕರ ಮೀನುಗಾರಿಕಾ ಬಂದರಿನಿಂದ ಆರಂಭವಾಗಲಿದೆ. ನಂತರ ಪಳ್ಳಿಕೆರೆ ಮೀನುಗಾರಿಕಾ ಕಾಲೋನಿಗೆ ಭೇಟಿ ನೀಡುವರು. ನಂತರ ಕಾಞಂಗಾಡ್ ಪಿಎಂಎಂಎಸ್‍ವೈ ಫಲಾನುಭವಿಗಳ ಸಭೆ ನಡೆಯಲಿದೆ.

        ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿಯನ್ನು ನಿರ್ಣಯಿಸುವುದು, ಮೀನುಗಾರರೊಂದಿಗೆ ಸಂವಾದ ನಡೆಸುವುದು ಮತ್ತು ಮೀನುಗಾರರ ಸಮಸ್ಯೆಗಳು ಮತ್ತು ಅನುಭವಗಳನ್ನು ಅರ್ಥಮಾಡಿಕೊಳ್ಳುವುದು ಪ್ರವಾಸದ ಉದ್ದೇಶವಾಗಿದೆ.       ಕಾರ್ಯಕ್ರಮದಡಿಯಲ್ಲಿ ಮೀನುಗಾರರು, ಮೀನು ಕೃಷಿಕರು ಮತ್ತು ಮೀನುಗಾರಿಕಾ ವಲಯದ ಉದ್ಯಮಿಗಳಿಗೆ ಪ್ರಶಸ್ತಿ ನೀಡಲಾಗುವುದು. ಅರ್ಹರಿಗೆ ಪ್ರಶಸ್ತಿ, ಪ್ರಮಾಣಪತ್ರ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್‍ಗಳನ್ನು ವಿತರಿಸಲಾಗುವುದು. ಮಾರ್ಚ್ 5, 2022 ರಂದು ಗುಜರಾತ್‍ನ ಮಾಂಡವಿಯಿಂದ ಪ್ರಾರಂಭವಾದ ಸಾಗರ್ ಪರಿಕ್ರಮ ಯಾತ್ರೆಯ ಆರು ಹಂತಗಳು ಈಗಾಗಲೇ ಪೂರ್ಣಗೊಂಡಿವೆ. ಗುಜರಾತ್, ಡಿಯು ಮತ್ತು ದಮನ್,  ಮಹಾರಾಷ್ಟ್ರ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಿಗೆ ಈಗಾಗಲೇ ಭೇಟಿ ನೀಡಿ ಕೇರಳಕ್ಕೆ ಭೇಟಿ ನೀಡಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries