HEALTH TIPS

ಮಾದಕ ವಸ್ತುಗಳ ಕಳ್ಳಸಾಗಣೆ: ಆ. 6ರಂದು ದೆಹಲಿಯಲ್ಲಿ ಮೈತೇಯಿ ಸಂಘಟನೆಗಳ ಹೋರಾಟ

                  ಗುವಾಹಟಿ: ಮಣಿಪುರದಿಂದ ದೇಶದ ರಾಜಧಾನಿವರೆಗೆ ವಿಸ್ತರಿಸಿರುವ ಚಿನ್‌-ಕುಕಿ ಸಮುದಾಯಕ್ಕೆ ಸೇರಿದ ಮಾದಕ ವಸ್ತುಗಳ ಕಳ್ಳಸಾಗಣೆದಾರರ ವಿರುದ್ಧ ಹೋರಾಟ ನಡೆಸಲು ಮೈತೇಯಿ ಸಂಘಟನೆಗಳು ನಿರ್ಧರಿಸಿವೆ.

                 ಶನಿವಾರ ಮಣಿಪುರದಲ್ಲಿ ಈ ಸಮುದಾಯದಿಂದ ಬೃಹತ್‌ ಪ್ರತಿಭಟನಾ ರ‍್ಯಾಲಿ ನಡೆದಿತ್ತು.

ಈ ಹೋರಾಟವನ್ನು ದೆಹಲಿಗೆ ವಿಸ್ತರಿಸಲು ಮಣಿಪುರ ಏಕತೆ ಸಂಯೋಜನಾ ಸಮಿತಿ (ಸಿಒಸಿಒಎಂಐ) ಹಾಗೂ ಮಣಿಪುರ-ದೆಹಲಿ ಸಂಯೋಜನಾ ಸಮಿತಿ ತೀರ್ಮಾನಿಸಿವೆ. ಹಾಗಾಗಿ, ಆಗಸ್ಟ್‌ 6ರಿಂದ ದೆಹಲಿಯ ಜಂತರ್‌ ಮಂತರ್‌ನಲ್ಲಿ ಒಂದು ವಾರದ ಕಾಲ ಧರಣಿ ನಡೆಯಲಿದೆ.

              ಕಣಿವೆ ರಾಜ್ಯದಲ್ಲಿ ಬೇರೂರಿರುವ ಈ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ದೂರಿರುವ ಸಮಿತಿಗಳು, ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಕಲ್ಪಿಸಬಾರದೆಂದು ಆಗ್ರಹಿಸಲಾಗುವುದು ಎಂದು ತಿಳಿಸಿವೆ.

               ಕುಕಿ ಬಂಡುಕೋರರ ವಿರುದ್ಧದ ಕಾರ್ಯಾಚರಣೆಗೆ ರೂಪಿಸಿದ್ದ ಒಪ್ಪಂದವನ್ನು ಅಮಾನತಿನಲ್ಲಿಡಲಾಗಿದೆ. ಭಾರತ-ಮ್ಯಾನ್ಮರ್‌ ಗಡಿ ಭಾಗದ ಭದ್ರತೆಗೆ ಅಸ್ಸಾಂ ರೈಫಲ್ಸ್‌ ಬದಲಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಪ್ರತ್ಯೇಕ ಪಡೆ ನಿಯೋಜಿಸುವಂತೆ ಒತ್ತಾಯಿಸಲಾಗುವುದು ಎಂದು ವಿವರಿಸಿವೆ.

                   ಮಣಿಪುರದ ಒಗ್ಗಟ್ಟಿಗೆ ಭಯೋತ್ಪಾದನೆ ಅಪಾಯಕಾರಿಯಾಗಿದೆ. ಇದು ದೇಶದ ಹಿತಾಸಕ್ತಿ ಹಾಗೂ ರಾಷ್ಟ್ರದ ವೈವಿಧ್ಯಕ್ಕೂ ಸವಾಲೊಡ್ಡಿದೆ. ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ತಿಳಿದಿದೆ. ಧಾರ್ಮಿಕ ಅಥವಾ ಮಾದಕ ವಸ್ತುಗಳ ಕಳ್ಳಸಾಗಣೆ ಜಾಲಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕಣಿವೆ ಪ್ರದೇಶವು ಅಫೀಮು ಮಾರಾಟದ ಮುಖ್ಯ ತಾಣವಾಗಲು ಅವಕಾಶ ನೀಡಬಾರದು ಎಂದು ಆಗ್ರಹಿಸಿವೆ.

                                                ಆರೋಪ ಏನು?:

              ಚಿನ್‌-ಕುಕಿ ಬಂಡುಕೋರರು ಮತ್ತು ನೆರೆಯ ಮ್ಯಾನ್ಮರ್‌ ಭಯೋತ್ಪಾದಕರು ಕುಕಿ ಸಮುದಾಯ ಹೆಚ್ಚಿರುವ ಪ್ರದೇಶಗಳಲ್ಲಿ ಅಫೀಮು ಉತ್ಪಾದನೆಗೆ ಬಳಸುವ ಗಸಗಸೆ ಕೃಷಿಯಲ್ಲಿ ತೊಡಗಿದ್ದಾರೆ ಎಂದು ಮೈತೇಯಿ ಸಮುದಾಯ ಆರೋಪಿಸಿದೆ.

                ಅಕ್ರಮ ವಲಸಿಗರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಸರ್ಕಾರವು ತೆರವು ಕಾರ್ಯಾಚರಣೆ ಕೈಗೊಂಡಿತು. ಬಳಿಕ ಗಸಗಸೆ ಕೃಷಿ ಚಟುವಟಿಕೆಗೂ ಕಡಿವಾಣ ಹಾಕಲು ಮುಂದಾಯಿತು. ಆ ಬಳಿಕ ನಮ್ಮ ಮೇಲೆ ಕುಕಿ ಜನರಿಂದ ದಾಳಿ ಹೆಚ್ಚಿದೆ ಎಂದು ಮೈತೇಯಿ ಜನರು ದೂರುತ್ತಾರೆ.

                    ಅಫೀಮು ತಯಾರಿಕೆಯಲ್ಲಿ ನಾವು ತೊಡಗಿಕೊಂಡಿಲ್ಲ. ಮೈತೇಯಿ ಸಮುದಾಯ ಮತ್ತು ಮಣಿಪುರ ಸರ್ಕಾರವು ನಮಗೆ ಅಕ್ರಮ ವಲಸಿಗರ ಪಟ್ಟ ಕಟ್ಟಲು ಹೊರಟಿದೆ. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಹುನ್ನಾರ ನಡೆದಿದೆ ಎಂಬುದು ಕುಕಿ ಸಮುದಾಯದ ಆರೋಪ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries