HEALTH TIPS

ಭೂ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಇಡುಕ್ಕಿಯಲ್ಲಿ 12 ಗಂಟೆಗಳ ಸುದೀರ್ಘ ಹರತಾಳ: ಪರೀಕ್ಷೆಗಳ ಮುಂದೂಡಿಕೆ

 

               ಇಡುಕ್ಕಿ: ಭೂ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಇಡುಕ್ಕಿಯಲ್ಲಿ ಇಂದು ಹರತಾಳ ನಡೆಯಿತು. ಇಡುಕ್ಕಿಯಲ್ಲಿ 12 ಗಂಟೆಗಳ ಹರತಾಳ ಯಶಸ್ವಿಯಾಯಿತು. 

            ವಿಪತ್ತು ನಿರ್ವಹಣಾ ಕಾಯ್ದೆಯಡಿ 13 ಪಂಚಾಯಿತಿಗಳಲ್ಲಿ ವಿಧಿಸಿರುವ ಕಟ್ಟಡ ನಿರ್ಮಾಣ ನಿಷೇಧ ಆದೇಶ ಹಿಂಪಡೆಯುವುದು, ಭೂ ಬಳಕೆ ಕಾನೂನು ತಿದ್ದುಪಡಿ, ವನ್ಯಜೀವಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವುದು, ಬೆಲೆ ಏರಿಕೆ ತಡೆ ಮುಂತಾದ ಬೇಡಿಕೆಗಳನ್ನು ಹರತಾಳದಲ್ಲಿ ಮುಂದಿಡಲಾಗಿತ್ತು.              ಸಂಜೆ 6ರವರೆಗೆ ನಡೆದ ಹರತಾಳ ಅಂಗವಾಗಿ ವಿವಿಧೆಡೆ ಧರಣಿ ನಡೆಸಲಾಯಿತು. ಹರತಾಳವನ್ನು ಪರಿಗಣಿಸಿ ಇಡುಕ್ಕಿ ಜಿಲ್ಲೆಯಲ್ಲಿ ಇಂದು ನಡೆಯಬೇಕಿದ್ದ ಎಲ್‍ಪಿ, ಯುಪಿ ಮತ್ತು ಎಚ್‍ಎಸ್ ತರಗತಿಗಳ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಮುಂದೂಡಲ್ಪಟ್ಟ ಪರೀಕ್ಷೆಯು ಇದೇ 25 ರಂದು ನಡೆಯಲಿದೆ ಎಂದು ತಿಳಿಸಲಾಗಿದೆ. ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯ ಇಂದು ನಡೆಸಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಶನಿವಾರಕ್ಕೆ ಮುಂದೂಡಿದೆ.

          ಹರತಾಳದ ಹೊರತಾಗಿಯೂ ಅಂಗಡಿಗಳನ್ನು ತೆರೆಯಲಾಗುವುದು ಎಂದು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ತಿಳಿಸಿತ್ತು. ಹರತಾಳ ಬಹಿಷ್ಕರಿಸಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿತ್ತು. ಆದರೂ ಬಹುತೇಕ ಕಡೆಗಳಲ್ಲಿ ಮುಚ್ಚಲಾಗಿತ್ತು. ಓಣಂ ಹಂಗಾಮಿನಿಂದ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಲಾಗಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries