ಕೋಝಿಕ್ಕೋಡ್: ರೈಲು ಟಿಕೆಟ್ ರದ್ದುಗೊಳಿಸಲು ಹೋಗಿ ಹಿರಿಯ ನಾಗರಿಕನೊಬ್ಬ ನಾಲ್ಕು ಲಕ್ಷಕ್ಕೂ ಹೆಚ್ಚು ರೂ. ಕಳೆದುಕೊಂಡಿರುವ ಘಟನೆ ಕೇರಳದ ಕೋಝಿಕ್ಕೋಡ್ ಬಳಿ ನಡೆದಿದೆ.
ವಂಡಿಪೆಟ್ಟಾದ ಎಂ. ಮೊಹಮ್ಮದ್ ಬಶೀರ್(78) ಎಂಬಾತನೇ ಆನ್ಲೈನ್ ಸ್ಕ್ಯಾಮ್ಗೆ ಬಲಿಯಾದ ವ್ಯಕ್ತಿಯಾಗಿದ್ದು, ನಕಲಿ ವೆಬ್ಸೈಟ್ನಲ್ಲಿ ಬಶೀರ್ ತನ್ನ ಟಿಕೆಟ್ ರದ್ದುಗೊಳಿಸಲು ಪ್ರಯತ್ನಿಸಿದಾಗ, ಒಬ್ಬ ವ್ಯಕ್ತಿ ತನ್ನನ್ನು ರೈಲ್ವೆ ಉದ್ಯೋಗಿ ಎಂದು ಪರಿಚಯಿಸಿಕೊಂಡು ಫೋನ್ ಕರೆ ಮೂಲಕ ಈತನಿಗೆ ಸಹಾಯ ಮಾಡಿದ್ದಾನೆ.
ತದನಂತರ ಬಶೀರ್, ಬ್ಯಾಂಕ್ ಮತ್ತು ಪೊಲೀಸ್ ಎರಡೂ ಸೈಬರ್ ಸೆಲ್ ವಿಭಾಗಗಳಲ್ಲಿ ದೂರು ದಾಖಲಿಸಿದ್ದು, ಹೆಚ್ಚಿನ ಡೇಟಾ ಸೋರಿಕೆಯಾಗದಂತೆ ಮುನ್ನೆಚ್ಚರಿಕಗೆ ವಹಿಸಿ ತನ್ನ ಫೋನ್ನ್ನು ಫಾರ್ಮ್ಯಾಟ್ ಮಾಡಿದ್ದಾನೆ. 'ರೆಸ್ಟ್ ಡೆಸ್ಕ್' ಎಂಬ ಆಯಪ್ ಅನ್ನು ಡೌನ್ಲೋಡ್ ಮಾಡುವುದರಿಂದ ವಂಚಕರು ಆರಾಮವಾಗಿ ಫೋನ್ಗೆ ಪ್ರವೇಶ ಪಡೆದುಕೊಂಡು ವಂಚನೆ ಎಸಗಿದ್ದಾರೆ ಎಂದು ಪೊಲೀಸ್ ಸೈಬರ್ ಸೆಲ್ನ ತನಿಖಾ ತಂಡ ಹೇಳಿದೆ. ಹಣವನ್ನು ನಾಲ್ಕು ಕಂತುಗಳಲ್ಲಿ ಡೆಬಿಟ್ ಮಾಡಲಾಗಿದ್ದು, ಕೋಲ್ಕತ್ತಾದಿಂದ 4,05,919 ರೂಪಾಯಿ ಡೆಬಿಟ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.