HEALTH TIPS

35ನೇ ಬಾರಿ; ಎಸ್.ಎನ್.ಸಿ. ಲಾವಲಿನ್ ಪ್ರಕರಣ ಮತ್ತೆ ಮುಂದೂಡಿದ ಸುಪ್ರೀಂ ಕೋರ್ಟ್

         

                ನವದೆಹಲಿ: ಎಸ್.ಎನ್.ಸಿ. ಲಾವಲಿನ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿನ್ನೆಯೂ ಪರಿಗಣಿಸಲಿಲ್ಲ. ಪ್ರಕರಣವನ್ನು ಪರಿಗಣಿಸಲು ಸಮಯ ಸಾಲದ ಕಾರಣ ಮತ್ತೆ ಮುಂದೂಡಲಾಯಿತು. ಇದು 35ನೇ ಬಾರಿಯ ಮುಂದೂಡಿಕೆಯಾಗಿ ಅಚ್ಚರಿಮೂಡಿಸಿತು. ಹೊಸ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.

            ಲಾವ್ಲಿನ್ ಪ್ರಕರಣದ ವಿಚಾರಣೆ ನಡೆಸಲಿದ್ದÀ ಪೀಠವು ನಿನ್ನೆ ಬೆಳಿಗ್ಗೆ ಮತ್ತೊಂದು ಪ್ರಕರಣವನ್ನು ವಿಚಾರಣೆ ನಡೆಸಿತು. ಈ ಪ್ರಕರಣದ ವಿಚಾರಣೆಯು ಸುದೀರ್ಘವಾದ ಕಾರಣ, ಲಾವಲಿನ್ ಪ್ರಕರಣ ಸೇರಿದಂತೆ ಪ್ರಕರಣಗಳನ್ನು ಪರಿಗಣಿಸಲು ಸಮಯವಿಲ್ಲ ಎಂದಿತು.

            ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿರುವುದು ಇದು 35ನೇ ಬಾರಿ. ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ದೀಪಂಕರ್ ದತ್ತಾ ಅವರ ಪೀಠವು ಪರಿಗಣಿಸುತ್ತಿದೆ. ಕಳೆದ ಬಾರಿ ಸಿಬಿಐ ವಕೀಲರ ಅನಾನುಕೂಲತೆಯಿಂದಾಗಿ ಪ್ರಕರಣವನ್ನು ಮುಂದೂಡಲಾಗಿತ್ತು. 

           ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇಂಧನ ಇಲಾಖೆಯ ಮಾಜಿ ಕಾರ್ಯದರ್ಶಿ ಕೆ ಮೋಹನಚಂದ್ರನ್ ಮತ್ತು ಇಂಧನ ಇಲಾಖೆಯ ಮಾಜಿ ಜಂಟಿ ಕಾರ್ಯದರ್ಶಿ ಎ ಪ್ರಾನ್ಸಿಸ್ ಅವರನ್ನು ಖುಲಾಸೆಗೊಳಿಸಿದ 2017 ರ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

           ವಿದ್ಯುತ್ ಮಂಡಳಿಯ ಮಾಜಿ ಹಣಕಾಸು ಸಲಹೆಗಾರ ಕೆ.ಜಿ.ರಾಜಶೇಖರನ್ ನಾಯರ್, ಮಂಡಳಿಯ ಮಾಜಿ ಅಧ್ಯಕ್ಷ ಆರ್.ಶಿವದಾಸನ್ ಮತ್ತು ಮಾಜಿ ಮುಖ್ಯ ಇಂಜಿನಿಯರ್ ಕಸ್ತೂರಿರಂಗ ಅಯ್ಯರ್ ಅವರು ಸಲ್ಲಿಸಿರುವ ಅರ್ಜಿಗಳನ್ನೂ ಸುಪ್ರೀಂ ಕೋರ್ಟ್ ಪರಿಗಣಿಸುತ್ತಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries