ಕುಂಬಳೆ: ಕಿದೂರು ಪಂಜಿಕಲ್ಲು ಫೆಂಡ್ಸ್ ಆರ್ಟ್-ಸ್ಪೋಟ್ರ್ಸ್ ಕ್ಲಬ್ ನೇತೃತ್ವದಲಿ ರಕ್ತದಾನ ಶಿಬಿರವು ಭಾನುವಾರ ರಾಜೀವ್ ಭವನ ಕುಂಟoಗೆರಡ್ಕದಲ್ಲಿ ನಡೆಯಿತು. ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಿಬಂದಿ ವರ್ಗದವರು ಸಹಕರಿಸಿದ್ದರು.
ಶಿಬಿರವನ್ನು ಕುತ್ತಾರು ಏನಪೆÇಯ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯೆ ಡಾ.ತೃಪ್ತಿ ಆಳ್ವ ದೀಪ ಬೆಳಗಿಸಿ ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಪೋಲೀಸ್ ಠಾಣಾ ಅಧಿಕಾರಿ ಅನೂಪ್ ಕುಮಾರ್ ಇ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ರವಿರಾಜ್ ಕೆ ಜಿ, ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್, ಕುಪ್ಪೆಪಂಜುರ್ಲಿ ಸೇವಾ ಸಮಿತಿ ಕುಂಟಂಗೇರಡ್ಕ ಸನ್ನಿಧಿಯ ಕೆ.ಚಂದ್ರ ಕಾಜೂರು ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭ ಡಾ. ತೃಪ್ತಿ ಆಳ್ವ ಅವರನ್ನು ಸನ್ಮಾನಿಸಲಾಯಿತು. ವಿನೋದ್ ಕುಮಾರ್ ಶ್ರಾವಣಕೆರೆ ಸ್ವಾಗತಿಸಿ,ಪ್ರಶಾಂತ್ ಕುಲಾಲ್ ವಂದಿಸಿದರು. ಪೂಜಿತ್ ಕುಲಾಲ್ ಶ್ರಾವಣಕೆರೆ ಪರಿಚಯಿಸಿದರು. ಮೇಕ್ಷಿ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.