HEALTH TIPS

ನಾಡಿನ ಸುಭಿಕ್ಷೆಗಾಗಿ ಮೊರತ್ತಣೆಯಿಂದ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರಿಗೆ ಪಾದಯಾತ್ರೆಗೈದ ಶಿವಶಕ್ತಿ ಫ್ರೆಂಡ್ಸ್ ಸದಸ್ಯರು

              ಮಂಜೇಶ್ವರ : ನಾಡಿನ ಸುಭಿಕ್ಷೆ ಹಾಗೂ ಸೌಹರ್ದತೆ ಕಾಪಿಡಲು ಮೊರತ್ತಣೆಯ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಮೊರತ್ತಣೆಯಿಂದ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರಿಗೆ ಪಾದಯಾತ್ರೆಗೈದು ಕೃತಾರ್ಥರಾಗಿದ್ದಾರೆ. 


           ಇದು ಈ ಕ್ಲಬ್ಬಿನ ನೇತೃತ್ವದಲ್ಲಿ ನಡೆಯುವ ಎರಡನೇಯ ಕ್ಷೇತ್ರ ಸಂದರ್ಶನದ ಪಾದ ಯಾತ್ರೆಯಾಗಿದ್ದು ಕಳೆದ ಬಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಪಾದಯಾತ್ರೆ ಗೈದಿದ್ದರು. ಈ ಬಾರಿ  ಮೊರತ್ತಣೆ ಮಂತ್ರದೇವತೆ ಸನ್ನಿಧಿಯಿಂದ ಹೊರಟು ರಕ್ತೇಶ್ವರಿ ಪದವು ದೈವಸ್ಥಾನ ಮೂಲಕ ವಾಸುಕಿನಾಗ ಸನ್ನಿಧಿ ರಕ್ತೇಶ್ವರಿ ಪರಿವಾರ ಸನ್ನಿಧಿ ತಚ್ಚಿರೆ, ಬಳಿಕ ದುರ್ಗಾ ಪರಮೇಶ್ವರಿ ಮಂದಿರ ಸುಂಕದಕಟ್ಟೆ, ಕೊರಗಜ್ಜ ಸನ್ನಿಧಿ ವರ್ಕಾಡಿ, ಕಾವಿ ಸುಬ್ರಹ್ಮಣ್ಯ ದೇವಸ್ಥಾನ ವರ್ಕಾಡಿ, ಮಂಜನಾಡಿ ವಿಷ್ಣುಮೂರ್ತಿ ದೇವಸ್ಥಾನ, ಮಂಜನಾಡಿ ದೈವಸ್ಥಾನ, ಅಲ್ಲಿಂದ ಶ್ರೀ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರುವಿಗೆ ತಲುಪಲಾಯಿತು. ಪಾದ ಯಾತ್ರೆಯ ನಡುವೆ ಜಾತಿ ಮತ ಭೇದ ಮರೆತು ಆಸ್ತಿಕ ವರ್ಗ ಇವರನ್ನು ಸ್ವಾಗತಿಸಿದ್ದು ಅಲ್ಲಲ್ಲಿ ಉಪಹಾರ, ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯ ಹಲವು ಜನರು ಈ ಬಾರಿಯ ಪಾದಯಾತ್ರೆಗೆ ಜತೆಗೂಡಿದ್ದರು. ಕ್ಷೇತ್ರ ಸಂದರ್ಶನದ ವೇಳೆ ಎಲ್ಲರೂ ಹಿಂದೂ ಸಾಂಪ್ರದಾಯಿಕ ಉಡುಪು ಧರಿಸಿ ಮಾದರಿಯಾದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries