HEALTH TIPS

ಕುಂಬಳೆ ರೈಲು ನಿಲ್ದಾಣ ನಿರ್ಲಕ್ಷ್ಯ: ನಾಳೆ ಪ್ರತಿಭಟನೆ: ಪ್ರೊ.ಕೆ.ಪಿ.ಜಯರಾಜನ್ ಉದ್ಘಾಟನೆ

                  ಕುಂಬಳೆ: 40 ಎಕ್ರೆಗಳಷ್ಟು ಸ್ವಂತ ನಿವೇಶನವಿರುವ ಕುಂಬಳೆ ರೈಲು ನಿಲ್ದಾಣ ಅಭಿವೃದ್ದಿಗೆ ಅಧಿಕೃತರು ವಹಿಸುತ್ತಿರುವ ನಿರ್ಲಕ್ಷ್ಯ ವಿರೋಧಿಸಿ ನಾಳೆ(ನ.1)ಸಂಜೆ 4 ಕ್ಕೆ ರೈಲು ನಿಲ್ದಾಣ ಪರಿಸರದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಮೊಗ್ರಾಲ್ ದೇಶೀಯ ವೇದಿ ಪದಾಧಿಕಾರಿಗಳು ನಿನ್ನೆ ಕುಂಬಳೆ ಪ್ರೆಸ್ ಪೋರಂ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವರು.

             ನಿಲ್ದಾಣದಲ್ಲಿ ಆದಾಯ ಮತ್ತು ಪ್ರಯಾಣಿಕರಿಗೆ ಅನುಗುಣವಾಗಿ ಮೂಲ ಅಭಿವೃದ್ಧಿ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ. ನಿಲ್ದಾಣದಲ್ಲಿ ಹೆಚ್ಚು ದೂರದ ರೈಲುಗಳಿಗೆ ನಿಲುಗಡೆಗೆ ಅವಕಾಶ ಕಲ್ಪಿಸುವುದು, ಮಳೆ ಮತ್ತು ಬಿಸಿಲಿನಿಂದ ಪ್ರಯಾಣಿಕರನ್ನು ರಕ್ಷಿಸಲು ಪ್ಲಾಟ್‍ಫಾರ್ಮ್‍ನಲ್ಲಿ ಸಾಕಷ್ಟು ಮೇಲ್ಛಾವಣಿ ನಿರ್ಮಿಸುವುದು, ರಾತ್ರಿ ವೇಳೆ ಪ್ಲಾಟ್‍ಫಾರ್ಮ್‍ನಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಕಾಯ್ದಿರಿಸುವಿಕೆ ಸೌಲಭ್ಯವನ್ನು ಒದಗಿಸುವುದು. ನಿಲ್ದಾಣಕ್ಕೆ ಪೂರಕವಾಗಿ ಸುಮಾರು 40 ಎಕರೆ ಜಮೀನು ಇದ್ದು, ಸ್ಟೇಷನ್ ಬ್ಲಿಂಗ್ ಲೈನ್‍ಗಳು, ಪಿಟ್ ಲೈನ್ ಮತ್ತು ಲೊಕೊ ಸಿಬ್ಬಂದಿ ಚಾಲನೆಯಲ್ಲಿರುವ ಕೊಠಡಿಗಳು ಮತ್ತು ಇದನ್ನು ಕಾಸರಗೋಡು ಮತ್ತು ಮಂಗಳೂರಿನ "ಉಪಗ್ರಹ" ನಿಲ್ದಾಣವಾಗಿ ಅಭಿವೃದ್ಧಿಪಡಿಸುವುದು (ಇದು ಕಾಸರಗೋಡು ಮತ್ತು ಮಂಗಳೂರಿನ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ. ಸಾಕಷ್ಟು ಸ್ಥಳಾವಕಾಶದ ಕೊರತೆ ಇರುವ ನಿಲ್ದಾಣಗಳು) ಎಂಬಿತ್ಯಾದಿ  ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ  ಆಯೋಜಿಸಲಾಗಿದೆ.

        ಪ್ರತಿಭಟನೆಯನನು ಕಣ್ಣೂರು ವಿಶ್ವವಿದ್ಯಾಲಯದ ಪರೀಕ್ಷಾ ಮಂಡಳಿಯ ಮಾಜಿ ನಿಯಂತ್ರಕ ಪ್ರೊ.ಕೆ.ಪಿ.ಜಯರಾಜನ್ ಉದ್ಘಾಟಿಸಲಿದ್ದಾರೆ. ಪ್ರಯಾಣಿಕರ ಸಂಘದ ಪದಾಧಿಕಾರಿಗಳು, ತ್ರಿ-ಸ್ಥರ ಪಂಚಾಯತಿ ಆಡಳಿತ ಸಮಿತಿ ಸದಸ್ಯರು, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ-ಸ್ಥಳೀಯ ಘಟಕಗಳ ಸಮಿತಿ ಪದಾಧಿಕಾರಿಗಳು, ಶಿಕ್ಷಕ-ವಿದ್ಯಾರ್ಥಿ ಸಂಘಗಳ ಮುಖಂಡರು, ಜಿಲ್ಲೆಯ ಪ್ರಮುಖ ಸಾಂಸ್ಕøತಿಕ ಮುಖಂಡರು, ಹೋಟೆಲ್‍ನ ಜಿಲ್ಲಾ ಮಾಲಕರ ಘಟಕ ಪದಾಧಿಕಾರಿಗಳು, ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದ ಗಣ್ಯರು, ಕ್ಲಬ್ ಪ್ರತಿನಿಧಿಗಳು ಕೈಜೋಡಿಸಲಿರುವರು. 

         ಸುದ್ದಿಗೋಷ್ಠಿಯಲ್ಲಿ ಮೊಗ್ರಾಲ್ ದೇಶೀಯ ವೇದಿ ಅಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ರಿಯಾಸ್ ಕರೀಂ, ಕೋಶಾಧಿಕಾರಿ ಎಚ್.ಎಂ.ಕರೀಂ, ಉಪಾಧ್ಯಕ್ಷರಾದ ಅಶ್ರಫ್ ಪೆರ್ವಾಡ್, ಅಬ್ದುಲ್ಲ ಕುಂಞÂ್ಞ ನಡುಪಾಲ,  ಜಂಟಿ ಕಾರ್ಯದರ್ಶಿಗಳಾದ ಪಿ.ಎಂ.ಮುಹಮ್ಮದ್ ಕುಂಞÂ್ಞ ಟೈಲ್ಸ್, ಬಿ.ಎ.ಮುಹಮ್ಮದ್ ಕುಂಞÂ್ಞ,  ಕುಂಪಲ ರೈಲು ಪ್ರಯಾಣಿಕರ ಸಂಘದ ಅಧ್ಯಕ್ಷ ನಿಸಾರ್ ಪೆರುವಾಡ್ ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries