HEALTH TIPS

ವಂದೇಭಾರತ್ ಎಕ್ಸ್ ಪ್ರೆಸ್ ವೇಳಾಪಟ್ಟಿ ಬದಲಾವಣೆ: ಪರಿಷ್ಕøತ ಸಮಯ ನಾಳೆಯಿಂದಲೇ ಜಾರಿಗೆ

               ತಿರುವನಂತಪುರಂ: ತಿರುವನಂತಪುರಂನಿಂದ ಕಾಸರಗೋಡು ಮೂಲಕ ಕೊಟ್ಟಾಯಂಗೆ ಸಂಚರಿಸುವ ವಂದೇಭಾರತ್ ಎಕ್ಸ್‍ಪ್ರೆಸ್‍ನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

              ಚೆಂಗನ್ನೂರಿನಲ್ಲಿ ನಿಲುಗಡೆಗೆ ಅವಕಾಶ ನೀಡಿದ ಕಾರಣ  ವೇಳಾಪಟ್ಟಿಯನ್ನು ಬದಲಾಯಿಸಲಾಗುತ್ತಿದೆ. ತಿರುವನಂತಪುರದಿಂದ ಹೊರಡುವ ರೈಲು ಚೆಂಗನ್ನೂರಿನಲ್ಲಿ ನಿಲುಗಡೆ ಮಾಡಿ ತ್ರಿಶೂರ್‍ನಲ್ಲಿ ಹೆಚ್ಚುವರಿ ಸಮಯ ನಿಲುಗಡೆ ಮಾಡಲು ನಿರ್ಧರಿಸಲಾಗಿದೆ. ಹೊಸ ವೇಳಾಪಟ್ಟಿ ಸೋಮವಾರ,(ನಾಳೆಯಿಂದ) ದಿಂದ ಜಾರಿಗೆ ಬರಲಿದೆ.

              ತಿರುವನಂತಪುರಂನಿಂದ ಬೆಳಗ್ಗೆ 5.20ಕ್ಕೆ ಹೊರಡುವ ವಂದೇ ಭಾರತ್ ಎಕ್ಸ್‍ಪ್ರೆಸ್ ಇನ್ನು 5.15ಕ್ಕೆ ರಾಜಧಾನಿಯಿಂದ ಸೇವೆ ಆರಂಭಿಸಲಿದೆ. 6.03ಕ್ಕೆ ಕೊಲ್ಲಂ ತಲುಪುವ ರೈಲು ಇಲ್ಲಿ ಎರಡು ನಿಮಿಷ ನಿಲ್ಲುತ್ತದೆ. ರೈಲು 6.05 ಕ್ಕೆ ಇಲ್ಲಿಂದ ಹೊರಟು 6.53 ಕ್ಕೆ ಚೆಂಗನ್ನೂರಿನಲ್ಲಿ ನಿಲ್ಲುತ್ತದೆ. ಇಲ್ಲಿಂದ ಎರಡು ನಿಮಿಷಗಳ ನಂತರ 6.55ಕ್ಕೆ ಹೊರಡಲಿದೆ.

              ಆದರೆ ಕೊಟ್ಟಾಯಂ ಮತ್ತು ಎರ್ನಾಕುಳಂನಿಂದ ರೈಲು ಆಗಮನದ ಸಮಯ ಅಥವಾ ಹೊರಡುವ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ವಂದೇಭಾರತ್ ನಿಯಮಿತ ಸಮಯ 9.30ಕ್ಕೆ ತ್ರಿಶೂರ್‍ಗೆ ಆಗಮಿಸಲಿದೆ. ಇಲ್ಲಿ ಒಂದು ನಿಮಿಷಕ್ಕೂ ಹೆಚ್ಚು ಕಾಲ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿಂದ 9.33ಕ್ಕೆ ಹೊರಟು ಶೋರ್ನೂರಿನಿಂದ ಕಾಸರಗೋಡಿಗೆ ಹೋಗುವ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries