HEALTH TIPS

ಜ್ಞಾನವಾಪಿ ವರದಿ ಸಲ್ಲಿಕೆಗೆ ನ. 28ರ ಗಡುವು

               ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿರುವ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ವರದಿ ಸಲ್ಲಿಸಲು ನೀಡಿದ್ದ ಕಾಲಾವಕಾಶವನ್ನು ಇನ್ನೂ 10 ದಿನಗಳಿಗೆ ವಿಸ್ತರಿಸಿ ವಾರಾಣಸಿ ಜಿಲ್ಲಾ ನ್ಯಾಯಾಲಯವು ಶನಿವಾರ ಆದೇಶ ನೀಡಿದೆ.

               ನವೆಂಬರ್ 17ರಂದು ವರದಿ ಸಲ್ಲಿಸಲು ಎಎಸ್‌ಐಗೆ ಈ ಮೊದಲು ನ್ಯಾಯಾಲಯ ಸೂಚಿಸಿತ್ತು.

ಕಾಲಾವಕಾಶವನ್ನು ಇನ್ನೂ 15 ದಿನಗಳಿಗೆ ವಿಸ್ತರಿಸುವಂತೆ ಎಎಸ್‌ಐ ಪರ ವಕೀಲರು ನ್ಯಾಯಾಲಯಕ್ಕೆ ಶುಕ್ರವಾರ ಮನವಿ ಮಾಡಿದ್ದರು. ಅದರಂತೆ, ವರದಿಯನ್ನು ನವೆಂಬರ್‌ 28ರ ಒಳಗೆ ಸಲ್ಲಿಸಲು ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ್‌ ಅವರು ಎಎಸ್‌ಐಗೆ ಹೇಳಿದ್ದಾರೆ.

                  ತಾಂತ್ರಿಕ ವರದಿಯು ಲಭ್ಯವಾಗದ ಕಾರಣ ಸಮೀಕ್ಷೆಯ ವರದಿ ಸಲ್ಲಿಸಲು ಎಎಸ್‌ಐಗೆ ಮತ್ತಷ್ಟು ಸಮಯ ತಗಲುತ್ತದೆ ಎಂದು ಹಿಂದೂ ಅರ್ಜಿದಾರರ ಪರ ವಕೀಲ ಮದನ್‌ ಮೋಹನ್‌ ಯಾದವ್‌ ಅವರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries