ತ್ರಿಶೂರ್: ಗುರುವಾಯೂರು ದೇವಸ್ಥಾನದಲ್ಲಿ ಪೂಜೆ ಮುಗಿಸಿ ಅಷ್ಟಪದಿ ಪಠಿಸದೇ ಬಾಗಿಲು ತೆರೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬೆಳಗ್ಗೆ ದೇವಸ್ಥಾನದಲ್ಲಿ ನಿರ್ಮಾಲ್ಯದ ನಂತರ ಮಾಲಾರ್ನಿವೇದ್ಯದ ಸಮಯದಲ್ಲಿ ಅಷ್ಟಪದಿ ಮಂತ್ರಪಠಣವಿಲ್ಲದೆ ದೇವಸ್ಥಾನವನ್ನು ತೆರೆಯಲಾಗಿದೆ ಎಂಬ ದೂರುಗಳಿವೆ. ದೇವಾಲಯದ ಇತಿಹಾಸದಲ್ಲಿ ಅಷ್ಟಪದಿ ಪಠಿಸದೆ ಪೂಜೆ ಮುಗಿಸಿರುವುದು ಇದೇ ಮೊದಲು.
ತಾಂತ್ರಿಕ ಮಹತ್ವವುಳ್ಳ ಅಷ್ಟಪದಿ ಪಠಣವನ್ನು ದೇವಾಲಯದಲ್ಲಿ ದಿನಕ್ಕೆ ಐದು ಬಾರಿ ನಡೆಸಲಾಗುತ್ತದೆ. ಬೆಳಗಿನ ನಿರ್ಮಾಲ್ಯದ ನಂತರ ಮಲಾರ ನಿವೇದ್ಯದ ಸಮಯದಲ್ಲಿ, ಉಷÀಪೂಜೆಯ ಸಮಯದಲ್ಲಿ, ಪಂತೀರಾದಿ ಪೂಜೆ, ಮಧ್ಯಾಹ್ನ ಪೂಜೆ ಮತ್ತು ರಾತ್ರಿ ಪೂಜೆಗೆ ಅಷ್ಟಪದಿ ಪಠಣ ಮಾಡಲಾಗುತ್ತದೆ. ಇದು ಗುರುವಾಯೂರ್ ದೇವಾಲಯದ್ದೇ ವಿಶಿಷ್ಟತೆಯಾಗಿದೆ. ಇತರ ಕೆಲವೆಡೆ ಪೂಜೆಗಳಲ್ಲಿ, ಅಷ್ಟಪದಿ ಗಾಯನವನ್ನು ಸಹ ಸಾಂದರ್ಭಿಕವಾಗಿ ನಡೆಸಲಾಗುತ್ತದೆ.
ಅಷ್ಟಪದಿ ಇಲ್ಲದೇ ಪೂಜೆ ನೆರವೇರಿಸಿದ ನಾಲಂಬಳದೊಳಗಿರುವ ದೇವಸ್ಥಾನದ ತುರ್ತು ಕಾರ್ಯಕರ್ತರ ಗಮನಕ್ಕೆ ವಿಷಯ ತರಲಾಯಿತು. ಇದಕ್ಕೆ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಭಕ್ತರ ಆರೋಪ. ಲೋಪಕ್ಕೆ ಕಾರಣರಾದ ನೌಕರನ ವಿರುದ್ಧ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ. ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಗಳು ಪ್ರಬಲ ಆಂದೋಲನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿವೆ.
ಸಹಾಯಕ ವ್ಯವಸ್ಥಾಪಕರನ್ನು ದೇವಸ್ಥಾನದ ತುರ್ತು ಕಾರ್ಯಕರ್ತರು ಅಣಿಗೊಳಿಸುವರು. ಇದರ ಆಧಾರದ ಮೇಲೆ ವ್ಯವಸ್ಥಾಪಕರು ದೇವಸ್ಥಾನದ ಉಪ ಆಡಳಿತಾಧಿಕಾರಿಗೆ ವರದಿ ನೀಡಿದ್ದಾರೆ. 20ರಂದು ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.





