HEALTH TIPS

ಮಿಜೋರಾಂ ವಿಧಾನಸಭೆ ಮತಎಣಿಕೆ ದಿನಾಂಕ ಬದಲಿಗೆ ಆಗ್ರಹಿಸಿ ನಿರಶನ

                     ಜ್ವಾಲ್‌: ವಿಧಾನಸಭೆ ಚುನಾವಣೆಯ ಮತಎಣಿಕೆ ದಿನಾಂಕ ಮುಂದೂಡುವ ಕುರಿತು ಚುನಾವಣಾ ಆಯೋಗ(ಇ.ಸಿ) ಮೌನವಹಿಸಿರುವುದನ್ನು ವಿರೋಧಿಸಿ ರಾಜ್ಯದ ಸಾಮಾಜಿಕ ಕಾರ್ಯಕರ್ತ ಲಾಲ್‌ಬಿಯಾಕ್‌ಥಂಗಾ (65) ಮಂಗಳವಾರ ನಿರಶನ ಕೈಗೊಂಡರು.  ಮತಎಣಿಕೆಯನ್ನು ಡಿಸೆಂಬರ್‌ 3ಕ್ಕೆ ಇ.ಸಿ ನಿಗದಿಪಡಿಸಿದೆ.

                ಆ ದಿನ ಭಾನುವಾರವಾಗಿರುವ ಕಾರಣ ಕ್ರೈಸ್ತ ಧರ್ಮೀಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದಲ್ಲಿ ಧಾರ್ಮಿಕ ಚಟುವಟಿಕೆಗಳಿಗೆ ಅಡ್ಡಿಯಾಗಲಿದೆ. ಹೀಗಾಗಿ ಮತಎಣಿಕೆ ದಿನಾಂಕವನ್ನು ಮುಂದೂಡಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳು ಆಯೋಗಕ್ಕೆ ಮನವಿ ಮಾಡಿದ್ದವು. 'ವಾಕಥಾನ್‌ ಮ್ಯಾನ್' ಎಂದೇ ಪ್ರಸಿದ್ಧರಾಗಿರುವ ಲಾಲ್‌ಬಿಯಾಕ್‌ಥಂಗಾ ಅವರು ಕೂಡಾ ಇ.ಸಿಗೆ ಮನವಿ ಸಲ್ಲಿಸಿದ್ದರು.

ಮನವಿಗೆ ಇ.ಸಿ ಓಗೊಡದ ಕಾರಣ ಮತದಾನದ ದಿವಸ ಐಜ್ವಾಲ್‌ನಲ್ಲಿಯ ರಾಜ್ಯ ಸರ್ಕಾರದ 'ವನಾಪ ಹಾಲ್‌'ನಲ್ಲಿ ಅವರು ನಿರಶನ ಕೈಗೊಂಡಿದ್ದಾರೆ. ತಾವು ಮತದಾನವನ್ನೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.

                  ಕಾಲ್ನಡಿಗೆಯಲ್ಲಿ ಸಾವಿರಾರು ಕಿಲೋಮೀಟರ್‌ ಸಂಚರಿಸಿ ಹಲವಾರು ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿರುವ ಇವರು ಮಿಜೋರಾಂನಲ್ಲಿ 'ವಾಕಥಾನ್‌ ಮ್ಯಾನ್' ಎಂದೇ ಪ್ರಸಿದ್ಧರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries