HEALTH TIPS

ಕಯ್ಯಾರ್ ಇಗರ್ಜಿಯ ವಾರ್ಷಿಕ ಹಬ್ಬ ಹಾಗೂ ನೂತನ ಇಗರ್ಜಿ ಯೋಜನೆಗೆ ಚಾಲನೆ

             ಉಪ್ಪಳ: ಕಯ್ಯಾರ್  ಕ್ರಿಸ್ತರಾಜ ದೇವಾಲಯದ ವಾರ್ಷಿಕ ಹಬ್ಬ ಹಾಗೂ ನೂತನ ಇಗರ್ಜಿಯ  ಯೋಜನೆಗೆ ಭಾನುವಾರ ಚಾಲನೆ ನೀಡಲಾಯಿತು.  ವಾರ್ಷಿಕ ಹಬ್ಬದಂಗವಾಗಿ  ಭಾನುವಾರ ಸಂಜೆ  ಇಗರ್ಜಿ ಮೈದಾನದಲ್ಲಿ  ದಿವ್ಯ ಬಲಿಪೂಜೆ ನಡೆಯಿತು.

             ಮಂಗಳೂರು  ಧರ್ಮಪ್ರಾಂತ್ಯದ   ವಿಕಾರ್ ಜನರಲ್  ವಂದನೀಯ  ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ  ಅವರು ದಿವ್ಯ ಬಲಿಪೂಜೆಯ ನೇತೃತ್ವ ನೀಡಿದರು. ಕಯ್ಯಾರ್ ಇಗರ್ಜಿಯ ಧರ್ಮಗುರು ವಂದನೀಯ ಫಾದರ್ ವಿಶಾಲ್ ಮೊನಿಸ್  ಹಾಗೂ ಪೆರ್ಮುದೆ ಇಗರ್ಜಿಯ ವಂದನೀಯ ಫಾದರ್ ಕ್ಲೋಡ್ ಕೋರ್ಡ ಉಪಸ್ಥಿತರಿದ್ದರು. ದಿವ್ಯ  ಬಲಿಪೂಜೆ ಬಳಿಕ  ಪರಮ ಪ್ರಸಾದದ ಮೆರವಣಿಗೆ ನಡೆಯಿತು. 

            ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಯ್ಯಾರ್  ನೂತನ ಇಗರ್ಜಿ ಯೋಜನೆಗೆ  ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ಅಧ್ಯಕ್ಷತೆ ವಹಿ ಸಿದ್ದರು. ಮಂಗಳೂರು ಮಾಜಿ ಶಾಸಕ ಜೆ.ಆರ್. ಲೋಬೊ, ಉದ್ಯಮಿ ಹಾಗೂ ದಾನಿ ಪೆರ್ಮುದೆಯ ನವೀನ್ ರಂಜಿತ್ ಡಿಸೋಜ, ಫಾದರ್ ವಿಶಾಲ್ ಮೊನಿಸ್, ವಿಜಯ ಜೇಸುರಾಜ್ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಜಾಸ್ಮಿನ್ ಲೂವಿಸ್, ಪಾಲನಾ  ಸಮಿತಿ ಉಪಾಧ್ಯಕ್ಷ  ರೋಶನ್ ಡಿ ಸೋಜ,  ಕಾರ್ಯದರ್ಶಿ ಝೀನಾ ಡಿ ಸೋಜ, ಆಶಿಕಾ ಡಿ ಸೋಜಾ ಮೊದಲಾದವರು ಉಪಸ್ಥಿತರಿದ್ದರು.

           ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ, ಜೆ. ಆರ್. ಲೋಬೊ,ನವೀನ್ ರಂಜಿತ್ ಡಿಸೋಜ ಯೋಜನೆಗಳಿಗೆ ಚಾಲನೆ ನೀಡಿದರು. ಕೆಥೋಲಿಕ್ ಸಭಾ ವತಿಯಿಂದ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ  ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ಬಹುಮಾನ  ವಿತರಿಸಿದರು. ಫಾದರ್ ವಿಶಾಲ್ ಮೋನಿಸ್ ಸ್ವಾಗತಿಸಿ, ರೋಶನ್ ಡಿಸೋಜ ವಂದಿಸಿದರು. ಜೋಸ್ಟಲ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು . 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries