ತಿರುವನಂತಪುರಂ: ಯುವ ಕಾಂಗ್ರೆಸ್ ನೇತೃತ್ವದಲ್ಲಿ ನಕಲಿ ಗುರುತಿನ ಚೀಟಿ ತಯಾರಿಸಿದ ಪ್ರಕರಣದಲ್ಲಿ ಸಾಫ್ಟ್ವೇರ್ ಮೇಲೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಯುವ ಕಾಂಗ್ರೆಸ್ ಮುಖಂಡರಿಗೆ ಪೋಲೀಸರು ನೋಟಿಸ್ ಕಳುಹಿಸಲಿದ್ದಾರೆ. ದೂರು ನೀಡಿದವರನ್ನು ಪತ್ತೆ ಹಚ್ಚಿ ತನಿಖೆ ಮುಂದುವರಿಸಲು ತನಿಖಾ ತಂಡ ನಿರ್ಧರಿಸಿದೆ.
ಐಸಿವೈ ಅಪ್ಲಿಕೇಶನ್ ಮೂಲಕ ಮತದಾನ ಮಾಡಲಾಯಿತು. ಎಲ್ಲಾ ನಕಲಿ ಕಾರ್ಡ್ಗಳು ಒಂದೇ ಸಂಖ್ಯೆಯನ್ನು ಬಳಸಿವೆ. ಈ ಕಾರ್ಡ್ ಬಳಸಿ ಮತದಾನ ಮಾಡಿದವರ ಮಾಹಿತಿ ಪಡೆಯಲು ಚುನಾವಣೆ ನಡೆಸಿದ ಏಜೆನ್ಸಿಯಿಂದ ಮಾಹಿತಿ ಸಂಗ್ರಹಿಸಬೇಕಿದೆ. ಈ ಬಗ್ಗೆ ಪೆÇಲೀಸರು ಕಾಂಗ್ರೆಸ್ ಮುಖಂಡರಿಗೆ ಪತ್ರ ಕಳುಹಿಸಲಿದ್ದಾರೆ.
ಕೆಪಿಸಿಸಿ ಉಪಾಧ್ಯಕ್ಷ ವಿಟಿ ಬಲರಾಂ ಅವರು ನಕಲಿ ಕಾರ್ಡ್ ತಯಾರಿಕೆಯಲ್ಲಿ ಭಾಗಿಯಾಗಿರುವ ಬಗ್ಗೆಯೂ ತನಿಖೆ ನಡೆಸಲಾಗುವುದು. ಮಲಪ್ಪುರಂನ ಹ್ಯಾಕರ್ನ ಸಹಾಯದಿಂದ ನಕಲಿ ಗುರುತಿನ ಚೀಟಿಯನ್ನು ತಯಾರಿಸಲಾಗಿದೆ ಎಂದು ಆರೋಪಿಸಲಾಗಿದೆ. ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ತನಿಖಾ ತಂಡ ತಿಳಿಸಿದೆ.





