HEALTH TIPS

ಖಾಯಂ ವಿಸಿಗಳಿಲ್ಲ; ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆ ಛಿದ್ರ: ಹೈಕೋರ್ಟ್‍ನಲ್ಲಿ ಅರ್ಜಿ

               ತಿರುವನಂತಪುರಂ: ಕೇರಳದ ವಿಶ್ವವಿದ್ಯಾನಿಲಯಗಳಲ್ಲಿ ವಿಸಿಗಳನ್ನು ನೇಮಿಸುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ.

               ವಿಸಿಗಳ ನೇಮಕವಾಗದ ಕಾರಣ ಒಂಬತ್ತು ವಿಶ್ವವಿದ್ಯಾಲಯಗಳ ಕಾರ್ಯವೈಖರಿ ಕುಂಠಿತವಾಗಿದೆ ಎಂದು ಸೂಚಿಸಿ ಅರ್ಜಿ ಸಲ್ಲಿಸಲಾಗಿದೆ. ಹೈಕೋರ್ಟ್ ಈ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ದಾವೆ ಎಂದು ಪರಿಗಣಿಸಲಿದೆ. ತಿರುವನಂತಪುರ ಯೂನಿವರ್ಸಿಟಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಶಿಕ್ಷಕಿಯಾಗಿದ್ದ ಡಾ.ಮೇರಿ ಜಾರ್ಜ್ ಅವರು ಅರ್ಜಿ ಸಲ್ಲಿಸಿರುವರು. 

          ಕೇರಳ, ಎಂಜಿ, ಕುಸಾಟ್, ಕಣ್ಣೂರು, ಕೆಟಿಯು, ಮಲಯಾಳಂ, ಕೃಷಿ, ಮೀನುಗಾರಿಕೆ ಮತ್ತು ಕಾನೂನು ವಿಶ್ವವಿದ್ಯಾಲಯಗಳು ಕಾಯಂ ವಿಸಿಗಳನ್ನು ಹೊಂದಿಲ್ಲ. ಕೇರಳ ಹಾಗೂ ಕೆಟಿಯುನಲ್ಲಿ ವಿಸಿಗಳ ನೇಮಕ ಪ್ರಕ್ರಿಯೆ ಆರಂಭಿಸುವಂತೆ ಹೈಕೋರ್ಟ್ ಸೂಚಿಸಿದ್ದರೂ ಈವರೆಗೆ ನೇಮಕ  ಕ್ರಮಗಳನ್ನು ಕೈಗೊಂಡಿಲ್ಲ. ವಿಶ್ವವಿದ್ಯಾನಿಲಯದ ಪ್ರತಿನಿಧಿಯನ್ನು ಶೋಧನಾ ಸಮಿತಿಗೆ ಸೂಚಿಸಲು ವಿಶ್ವವಿದ್ಯಾಲಯದ ಅಧಿಕಾರಿಗಳು ಇಚ್ಛಿಸದ ಕಾರಣ ಶೋಧನಾ ಸಮಿತಿ ರಚನೆಯಲ್ಲಿ ವಿಳಂಬವಾಗಿದೆ. ಇದನ್ನು ಸೂಚಿಸಿ ರಾಜಭವನ ಹಲವು ಬಾರಿ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿದೆ. ಆದರೆ ಈ ಪತ್ರಗಳನ್ನು ವಿಶ್ವವಿದ್ಯಾಲಯಗಳು ನಿರ್ಲಕ್ಷಿಸಿವೆ.

           ಈ ಹಿನ್ನೆಲೆಯಲ್ಲಿ ಯುಜಿಸಿ ನಿಯಮಾವಳಿಯಂತೆ ಕುಲಪತಿಗಳು, ರಾಜ್ಯಪಾಲರು ಹಾಗೂ ಮುಖ್ಯ ನ್ಯಾಯಮೂರ್ತಿಗಳಿಗೆ ಶೋಧನಾ ಸಮಿತಿ ರಚಿಸಿ ವಿಸಿ ನೇಮಕ ಮಾಡುವಂತೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಕುಲಪತಿಗಳು, ಮುಖ್ಯ ನ್ಯಾಯಮೂರ್ತಿಗಳು, ಕೇರಳ ಸರ್ಕಾರ, ಯುಜಿಸಿ, ಎಐಸಿಟಿಇ, ಬಾರ್ ಕೌನ್ಸಿಲ್ ಮತ್ತು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‍ಗಳು ವಿರುದ್ಧ ಪಕ್ಷಗಳಾಗಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries