ಚೆನ್ನೈ: ಬಾಲ್ಯದ ಗೆಳತಿಯನ್ನು ಕ್ರೌರ್ಯದಿಂದ ಜೀವಂತವಾಗಿ ಸುಟ್ಟು ಹಾಕಿದ ಆರೋಪದ ಹಿನ್ನೆಲೆಯಲ್ಲಿ ಲಿಂಗ ಪರಿವರ್ತಿತ ಪುರುಷನನ್ನು (ವೆಟ್ರಿಮಾರನ್) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈ: ಬಾಲ್ಯದ ಗೆಳತಿಯನ್ನು ಕ್ರೌರ್ಯದಿಂದ ಜೀವಂತವಾಗಿ ಸುಟ್ಟು ಹಾಕಿದ ಆರೋಪದ ಹಿನ್ನೆಲೆಯಲ್ಲಿ ಲಿಂಗ ಪರಿವರ್ತಿತ ಪುರುಷನನ್ನು (ವೆಟ್ರಿಮಾರನ್) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈನ ದಕ್ಷಿಣ ಉಪನಗರದ ಕೆಳಂಬಕ್ಕಂ ಬಳಿಯ ತಲಂಬೂರ್ನಲ್ಲಿ ಈ ಘಟನೆ ನಡೆದಿದೆ.
ಮಧುರೈನ 25 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ನಂದಿನಿ ಅವರಿಗೆ ವೆಟ್ರಿಮಾರನ್ ಕೃತ್ಯದ ಬಗ್ಗೆ ಯಾವುದೇ ಅನುಮಾನ ಮೂಡಿರಲಿಲ್ಲ. ನಂದಿನಿಯ ಹುಟ್ಟುಹಬ್ಬದಂದು ಆಶ್ಚರ್ಯವನ್ನುಂಟು ಮಾಡಲು ಬಯಸಿದ್ದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
26 ವರ್ಷದ ಪಾಂಡಿ ಮಹೇಶ್ವರಿ ಮಧುರೈನ ಶಾಲೆಯೊಂದರಲ್ಲಿ ನಂದಿನಿಯೊಂದಿಗೆ ಓದುತ್ತಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಮಹೇಶ್ವರಿ ತನ್ನ ಹೆಸರನ್ನು ವೆಟ್ರಿಮಾರನ್ ಎಂದು ಬದಲಾಯಿಸಿಕೊಂಡ ನಂತರವೂ ನಂದಿನಿ ಮಾನವೀಯ ನೆಲೆಯಲ್ಲಿ ತನ್ನ ಸ್ನೇಹವನ್ನು ಮುಂದುವರೆಸಿದ್ದಳು. ಇಬ್ಬರೂ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.