HEALTH TIPS

ಪಾಲಕ್ಕಾಡ್ ಚಾತನ್ ಕುಳಂಗರ ದೇವಸ್ಥಾನದ ಭೂಮಿಯನ್ನು ದೇವಸ್ವಂಗೆ ಹಸ್ತಾಂತರಿಸುವಂತೆ ಹೈಕೋರ್ಟ್ ಆದೇಶ

                ತಿರುವನಂತಪುರಂ: ಪಾಲಕ್ಕಾಡ್ ವ್ಯಾಪ್ತಿಯ ಚಾತನ್ ಕುಳಂಗರ ದೇವಸ್ಥಾನಕ್ಕೆ ಸೇರಿದÀ ಭೂಮಿಯನ್ನು ದೇವಸ್ವಂಗೆ ಹಸ್ತಾಂತರಿಸಬೇಕು ಎಂದು ಹೈಕೋರ್ಟ್ ಹೇಳಿದೆ.

                 ಇದು ಹಲವು ವರ್ಷಗಳಿಂದ ಎನ್‍ಎಸ್‍ಎಸ್‍ನ ಗುತ್ತಿಗೆ ಜಮೀನಾಗಿತ್ತು. 50 ಎಕರೆ ಜಮೀನಿತ್ತು. ಜಸ್ಟೀಸ್ ಸತೀಶ್ ನೈನಾನ್ ಅವರು ಈ ಜಾಗವನ್ನು ಚಾತನ್ ಕುಳಂಗರ  ದೇವಸ್ವಂಗೆ ಹಸ್ತಾಂತರಿಸಬೇಕು ಎಂದು ಆದೇಶಿಸಿರುವರು.

               1969ರಿಂದ 36 ವರ್ಷಗಳ ಅವಧಿಗೆ ಎನ್‍ಎಸ್‍ಎಸ್‍ಗೆ ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆ ಅವಧಿ ಮುಗಿದರೂ ದೇವಸ್ಥಾನದ ಭೂಮಿಯನ್ನು ಹಿಂತಿರುಗಿ ನೀಡಿರಲಿಲ್ಲ ಎಂದು ದೇವಸ್ವಂ ದೂರಿತ್ತು. 

             ಮುಂಚಿನ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯವು ಭೂ ಸುಧಾರಣಾ ಕಾಯ್ದೆಯ ನಿಬಂಧನೆಗಳ ಪ್ರಯೋಜನವನ್ನು ಉಲ್ಲೇಖಿಸಿ ಎನ್‍ಎಸ್‍ಎಸ್ ಪರವಾಗಿ ಆದೇಶವನ್ನು ನೀಡಿತ್ತು. ಆದರೆ ದೇವಸ್ವಂ 2017ರಲ್ಲಿ ಹೈಕೋರ್ಟ್ ಮೆಟ್ಟಿಲೇರಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries