ಅಯೋಧ್ಯೆ: ರಾಮ ಮಂದಿರ ಪ್ರತಿಷ್ಠಾಪನೆ ಬಳಿಕ ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರ್ ಸಂತಸ ಹಂಚಿಕೊಂಡಿದ್ದಾರೆ. ಇಡೀ ಭಾರತವೇ ಎದುರು ನೋಡುತ್ತಿದ್ದ ಅಯೋಧ್ಯೆ ರಾಮಮಂದಿರ ಸಮಾರಂಭಕ್ಕೆ ಕಾಂಗ್ರೆಸ್ ಗೈರು ಹಾಜರಾಗಿರುವ ಸಂದರ್ಭದಲ್ಲಿ ತರೂರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ರಾಮ್ ಲಲ್ಲಾ ಅವರ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಭಗವಾನ್ ರಾಮನ ಚಿತ್ರವನ್ನು ಹಂಚಿಕೊಂಡ ನಂತರ, ಕೇರಳ ಸೇರಿದಂತೆ ಕಾಂಗ್ರೆಸ್-ಎಡ-ಜಿಹಾದಿ ಪ್ರೊಫೈಲ್ಗಳಿಂದ ಶಶಿ ತರೂರ್ ವಿರುದ್ಧ ಟೀಕೆಗಳು ವ್ಯಕ್ತವಾದವು. ತರೂರ್ ಬಣ್ಣ ಹೊರಬಿದ್ದಿದೆ ಎಂಬ ಕಾಮೆಂಟ್ಗಳೂ ಬಂದಿವೆ. ಕೆಲವರು ಅಲ್ಲಾಹು ಅಕ್ಬರ್ ಹೇಳಿಕೆಗಳೊಂದಿಗೆ ಪೋಸ್ಟ್ ಅಡಿಯಲ್ಲಿ ಹಂಚಿಕೊಂಡಿದ್ದಾರೆ.