ಅಯೋಧ್ಯೆ: ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ ಸಾಂಗವಾಗಿ ಸಂಪನ್ನಗೊಂಡಿದೆ.
ಪ್ರಧಾನಿ ಮೋದಿ ಮಂದಿರ ನಿರ್ಮಾಣ ಕಾರ್ಮಿಕರನ್ನು ಭೇಟಿ ಮಾಡಿದ್ದು ಅವರ ಮೇಲೆ ಪುಷ್ಪವೃಷ್ಠಿಗೈದು ಸಂಭ್ರಮಿಸಿದ್ದಾರೆ. ಇದೇ ವೇಳೆ ದೇವಾಲಯದ ಪ್ರಾಂಗಣದಲ್ಲಿರುವ ಶಿವ ದೇವಾಲಯ ಸೇರಿ ಹಲವು ಮಂದಿರಗಳಿಗೆ ಭೇಟಿ ನೀಡಿದರು. ಇದೇ ವೇಳೆ ಮೋದಿ ಜಟಾಯು ಪುತ್ಥಳಿಯನ್ನೂ ಅನಾವರಣಗೊಳಿಸಿದರು.
ಇತ್ತೀಚಿನ ವರದಿಗಳ ಪ್ರಕಾರ ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ಉಪವಾಸ ವ್ರತ ಅಂತ್ಯಗೊಳಿಸಿದ್ದು, ಅಯೋಧ್ಯೆಯಿಂದ ದೆಹಲಿಗೆ ವಾಪಸ್ ತೆರಳುತ್ತಿದ್ದಾರೆ.