HEALTH TIPS

ರಾಜ್ಯ ಎದುರಿಸುತ್ತಿರುವ ಗಂಭೀರ ಆರ್ಥಿಕ ಬಿಕ್ಕಟ್ಟಿಗೆ ಕೇಂದ್ರ ಸರಕಾರವೇ ಕಾರಣ: ನೀತಿ ಘೋಷಣೆ ಉಲ್ಲೇಖ

                ತಿರುವನಂತಪುರ: ರಾಜ್ಯ ಎದುರಿಸುತ್ತಿರುವ ಗಂಭೀರ ಆರ್ಥಿಕ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ರಾಜ್ಯಪಾಲರ ನೀತಿ ಘೋಷಣೆ ಭಾಷಣದಲ್ಲಿ ಟೀಕೆ ವ್ಯಕ್ತವಾಗಿದೆ.

              ಪರಿಹಾರ ಕಂಡುಕೊಳ್ಳಲು ಸರ್ಕಾರ ಸುಪ್ರೀಂ ಕೋರ್ಟ್‍ನ ಮೊರೆ ಹೋಗಬೇಕಾಯಿತು. 15ನೇ ಹಣಕಾಸು ಆಯೋಗದ ಅಂಗೀಕೃತ ಶಿಫಾರಸುಗಳ ವಿರುದ್ಧ ಹಿಂದಿನ ಪರಿಣಾಮದೊಂದಿಗೆ ಕ್ರೆಡಿಟ್ ಮಿತಿಯನ್ನು ಕಡಿತಗೊಳಿಸಲಾಗಿದೆ ಮತ್ತು ತೀವ್ರ ನಗದು ಕೊರತೆಯನ್ನು ಅನುಭವಿಸುತ್ತಿದೆ. ಕೇಂದ್ರ ಸರಕಾರ ತನ್ನ ನಿಲುವನ್ನು ತುರ್ತಾಗಿ ಪರಿಶೀಲಿಸಬೇಕು ಎಂದೂ ನೀತಿ ಘೋಷಣೆಯಲ್ಲಿ ಆಗ್ರಹಿಸಲಾಗಿದೆ.

            ರಾಜ್ಯಪಾಲರ ಭಾಷಣದ ನಾಲ್ಕು ಪ್ಯಾರಾಗಳಲ್ಲಿ ಕೇಂದ್ರದ ವಿರುದ್ಧ ಚಾರ್ಜ್ ಶೀಟ್ ಇದೆ. ವಿತ್ತೀಯ ಬಿಕ್ಕಟ್ಟು ಆರ್ಥಿಕ ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಸಮಾನತೆಯ ಪರಿಣಾಮವಾಗಿದೆ. ಆದಾಯದ ಮೂಲಗಳ ಮಿತಿಯನ್ನು ಮೀರಿ ಅಭಿವೃದ್ಧಿಯ ವೆಚ್ಚವನ್ನು ರಾಜ್ಯಗಳು ಭರಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವುದು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿನ ದೊಡ್ಡ ಅಸಮಾನತೆಯನ್ನು ಸೂಚಿಸುತ್ತದೆ.

             10ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.3.88ರಷ್ಟಿದ್ದ ಕೇಂದ್ರ ತೆರಿಗೆ ಪಾಲು 15ನೇ ಆಯೋಗದ ಅವಧಿಯಲ್ಲಿ ಕೇವಲ ಶೇ.1.92ಕ್ಕೆ ಕುಸಿದಿದೆ. ಪ್ರಸಕ್ತ ವರ್ಷದ ಜಿ.ಎಸ್.ಟಿ ಪರಿಹಾರ ರದ್ದತಿ, ಕಂದಾಯ ಕೊರತೆ ಅನುದಾನ ಕಡಿತ ಮತ್ತು ರಾಜ್ಯ ಬಜೆಟ್‍ನ ಹೊರತಾದ ಸಾಲಕ್ಕೆ ಕೇಂದ್ರ ವಿಧಿಸಿರುವ ನಿಬರ್ಂಧಗಳು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಕೇಂದ್ರದ ಯೋಜನೆಗಳಿಗೆ ಅರ್ಹ ಅನುದಾನ ಮತ್ತು ನೆರವು ಹಂಚಿಕೆಗಳನ್ನು ತಡೆಹಿಡಿಯುವ ಬಗ್ಗೆ ಸರ್ಕಾರವು ಚಿಂತಿಸುತ್ತಿದೆ ಎಂದು ಕೇಂದ್ರದ ವಿರುದ್ದ ಟೀಕೆ ವ್ಯಕ್ತಪಡಿಸಲಾಗಿದೆ.

          ಹಲವು ಸವಾಲುಗಳ ನಡುವೆಯೂ ಅದನ್ನು ಮೆಟ್ಟಿ ನಿಂತು ಅದ್ಭುತ ಸಾಧನೆ ಮಾಡಿದೆ ಎಂದು ಸರ್ಕಾರ ಹೇಳಿಕೊಂಡಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries