ಕೊಚ್ಚಿ: ಕೆಲವು ದೇವಸ್ಥಾನಗಳಲ್ಲಿ ಸಂಭವಿಸುವ ಅವಘಡಗಳ ಹಿನ್ನೆಲೆಯಲ್ಲಿ ದೇವಸ್ಥಾನದ ಉತ್ಸವಗಳ ಸಂದರ್ಭದಲ್ಲಿ ಸಿಡಿಮದ್ದು ಪ್ರದರ್ಶನವÀನ್ನು ನಿಷೇಧಿಸುವುದು ರಸ್ತೆ ಅಪಘಾತದ ನಂತರ ರಸ್ತೆ ಸಂಚಾರವನ್ನು ನಿಷೇಧಿಸಿದಂತೆ ಅಥವಾ ರೈಲ್ವೆ ಹಳಿಯಲ್ಲಿ ಅಪಘಾತದ ನಂತರ ರೈಲ್ವೆ ಸಂಚಾರವನ್ನು ನಿಷೇಧಿಸಿದಂತಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಪೋಲೀಸ್, ಅಗ್ನಿಶಾಮಕ ದಳ ಸೇರಿದಂತೆ ರಾಜ್ಯದ ಆಡಳಿತದ ಮೇಲ್ವಿಚಾರಣೆಯಲ್ಲಿ ಕಟ್ಟುನಿಟ್ಟಿನ ಷರತ್ತುಗಳ ಅಡಿಯಲ್ಲಿ ಸಿಡಿಮದ್ದು ಪ್ರದರ್ಶನದಂತಹ ಆಚರಣೆಗಳಿಗೆ ಅವಕಾಶ ನೀಡಬೇಕು ಎಂದು ನ್ಯಾಯಮೂರ್ತಿ ಪಿ.ವಿ. ಕುಂಞÂ್ಞ ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ. ತ್ರಿಶೂರ್ ಅರಾಟುಪುಳ ಪೂರಂ ಮತ್ತು ಪಾಲಕ್ಕಾಡ್ ಕವಸ್ಸೇರಿ ಪೂರಂಗಾಗಿ ಸಿಡಿಮದ್ದುಗಳನ್ನು ಬಳಸಲು ಅನುಮತಿ ನಿರಾಕರಿಸಲಾಗಿತ್ತು. ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ದೇವಸ್ಥಾನದ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಜಿಲ್ಲಾ ಮ್ಯಾಜಿಸ್ಟ್ರೇಟ್ ಎತ್ತಿದ ಪ್ರಮುಖ ಕಾಳಜಿ ಮಾನವ ಸುರಕ್ಷತೆಯ ಬಗ್ಗೆ ಎಂದು ನ್ಯಾಯಾಲಯ ಹೇಳಿದೆ. ಇನ್ನುಳಿದ ದೇವಸ್ಥಾನಗಳಲ್ಲಿ ಸಿಡಿಮದ್ದು ಸಿಡಿಸುವ ವೇಳೆ ಕೆಲವು ಅವಘಡಗಳು ಸಂಭವಿಸಿರುವುದು ಗೊತ್ತಾಗಿದೆ. ಆದಾಗ್ಯೂ, ಈ ಎರಡು ದೇವಾಲಯಗಳಲ್ಲಿ ಪೂರಂ ಹಬ್ಬ ಮತ್ತು ಅದರ ಸಿಡಿಮದ್ದು ಪ್ರದರ್ಶನವು ಹಬ್ಬಕ್ಕೆ ಸಂಬಂಧಿಸಿದ ಆಚರಣೆಗಳಾಗಿವೆ ಎಂಬುದು ಒಪ್ಪಿಕೊಳ್ಳುವ ಸತ್ಯ. ಹಬ್ಬವನ್ನು ಆಚರಿಸಲು ಪಟಾಕಿಗಳನ್ನು ದಶಕಗಳಿಂದ ಬಳಸಲಾಗುತ್ತಿದೆ. ಇನ್ನು ಕೆಲವು ದೇವಸ್ಥಾನಗಳಲ್ಲಿ ಪಟಾಕಿ ಸಿಡಿತಕ್ಕೆ ಸಂಬಂಧಿಸಿದಂತೆ ಅಹಿತಕರ ಘಟನೆಗಳು ನಡೆದಿರುವುದು ನಿಜವಾದರೂ ಪಟಾಕಿ ಸಿಡಿಸುವ ವೇಳೆ ಯಾವುದೇ ಅನಾಹುತ ಸಂಭವಿಸಿದರೆ ಅದು ಪೋಲೀಸ್, ಅಗ್ನಿಶಾಮಕ ಇಲಾಖೆ, ಸ್ಪೋಟಕ ನಿಯಂತ್ರಣ ಇಲಾಖೆ ಸೇರಿದಂತೆ ಆಡಳಿತದ ತಪ್ಪು. ಇಂತಹ ಘಟನೆಗಳನ್ನು ತಡೆಗಟ್ಟುವ ಸಲುವಾಗಿ, ಆಡಳಿತ ಮತ್ತು ಅದರ ಸಂಸ್ಥೆಗಳು ದೇವಾಲಯದ ಉತ್ಸವಗಳಲ್ಲಿ ನಿಯಮಿತವಾಗಿ ಪಟಾಕಿಗಳನ್ನು ಪ್ರದರ್ಶಿಸಲು ಕಠಿಣ ಷರತ್ತುಗಳನ್ನು ವಿಧಿಸಬಹುದು. ಧಾರ್ಮಿಕ ದೇವಾಲಯದ ಉತ್ಸವಗಳಿಗೆ ಸಂಬಂಧಿಸಿದ ಪಟಾಕಿಗಳನ್ನು ರಾಜ್ಯ ಮತ್ತು ಅದರ ಕಾರ್ಯವಿಧಾನಗಳ ಮೇಲ್ವಿಚಾರಣೆಯಲ್ಲಿ ಕಟ್ಟುನಿಟ್ಟಾದ ಷರತ್ತುಗಳಿಗೆ ಒಳಪಟ್ಟು ಮುಂದುವರಿಸಲು ಅನುಮತಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಇತ್ತೀಚಿನ ವರ್ಷಗಳಲ್ಲಿ ಕೆಲವು ದೇವಾಲಯಗಳಲ್ಲಿ ಸಿಡಿಮದ್ದುಗಳು ಮಾನವ ಜೀವ ಸೇರಿದಂತೆ ದುರಂತಗಳಿಗೆ ಕಾರಣವಾಗಿವೆ ಎಂಬ ಕಾರಣಕ್ಕಾಗಿ ರಾಜ್ಯವು ಅರ್ಜಿಗಳಿಗೆ ಆಕ್ಷೇಪಿಸಿದೆ.