ಬದಿಯಡ್ಕ: ಕಜಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು ಇವರ ವೈಷ್ಣವೀ ನಾಟ್ಯಾಲಯದ ವತಿಯಿಂದ ನೃತ್ಯಾರ್ಪಣಂ ಭರತನಾಟ್ಯ ಕಾರ್ಯಕ್ರಮ ನೆರವೇರಿತು. ಬ್ರಹ್ಮ ಕಲಶೋತ್ಸವ ಸಮಿತಿಯ ವತಿಯಿಂದ ನೃತ್ಯ ಗುರುಗಳಿಗೆ ಶ್ರೀ ಕ್ಷೇತ್ರದ ಪ್ರಸಾದ ಹಾಗೂ ಸ್ಮರಣಕೆಯನ್ನಿತ್ತು ಗೌರವಿಸಿದರು.