ಓಕಾ: ಭಾರತೀಯ ಕರಾವಳಿ ರಕ್ಷಣಾ ಪಡೆಯ(ಐಜಿಸಿ) ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಇದರಿಂದ ದೇಶದ ಕರಾವಳಿಯು ಸುರಕ್ಷಿತವಾಗಿರಲಿದೆ ಎಂದು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಶುಕ್ರವಾರ ತಿಳಿಸಿದರು.
0
samarasasudhi
ಮಾರ್ಚ್ 30, 2024
ಓಕಾ: ಭಾರತೀಯ ಕರಾವಳಿ ರಕ್ಷಣಾ ಪಡೆಯ(ಐಜಿಸಿ) ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಇದರಿಂದ ದೇಶದ ಕರಾವಳಿಯು ಸುರಕ್ಷಿತವಾಗಿರಲಿದೆ ಎಂದು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಶುಕ್ರವಾರ ತಿಳಿಸಿದರು.
ಗುಜರಾತ್ನ ಓಕಾದಲ್ಲಿ ಐಸಿಜಿಯ ಹೋವರ್ಕ್ರಾಫ್ಟ್ ನಿರ್ವಹಣಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅರಮನೆ ಅವರು, 'ಪಾಕಿಸ್ತಾನದ ಕರಾವಳಿ ಸೇರಿದಂತೆ ಸಮುದ್ರದಲ್ಲಿನ ದೂರದ ಪ್ರದೇಶಗಳ ಮೇಲೆ ನಿಗಾ ಇಡುವ ಸಾಮರ್ಥ್ಯವನ್ನು ಕರಾವಳಿ ಪಡೆ ಹೊಂದಿದೆ.
'ಐಜಿಸಿ ಬಳಿ ಈಗ ಹಲವಾರು ಗಸ್ತು ನೌಕೆಗಳು, ವೇಗದ ದೋಣಿಗಳು ಮತ್ತು ಯುದ್ಧವಿಮಾನಗಳು ಇವೆ. ಹೋವರ್ಕ್ರಾಫ್ಟ್ಗಳ ಮೂಲಕ ಜೌಗು ದ್ವೀಪಗಳಂತಹ ಕಷ್ಟಕರವಾದ ಪ್ರದೇಶಗಳನ್ನು ತಲುಪಬಹುದು' ಎಂದು ತಿಳಿಸಿದರು.
'ಭಾರತೀಯ ನೌಕಾಪಡೆ, ಗಡಿ ಭದ್ರತಾ ಪಡೆ, ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆಗಳೊಂದಿಗೆ ಸೇರಿ ಐಜಿಸಿಯು ಸಮುದ್ರ ಮಾರ್ಗದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಯಲು ಪ್ರಯತ್ನಿಸುತ್ತಿದೆ' ಎಂದರು.