HEALTH TIPS

ಪ್ರಧಾನಿ 15 ರಂದು ತಿರುವನಂತಪುರಕ್ಕೆ: ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿ

                  ತಿರುವನಂತಪುರಂ: ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಲ ನೀಡಲು ಪ್ರಧಾನಿ ಮತ್ತೆ ತಿರುವನಂತಪುರಕ್ಕೆ ಬರುತ್ತಿದ್ದಾರೆ.

                  ಪ್ರಧಾನಿ ನರೇಂದ್ರ ಮೋದಿ ಇದೇ 15ರಂದು ತಿರುವನಂತಪುರಕ್ಕೆ ಆಗಮಿಸಲಿದ್ದಾರೆ. 15ರಂದು ಮಧ್ಯಾಹ್ನ ರಾಜಧಾನಿ ತಲುಪುವರು. 

                      ತಿರುವನಂತಪುರಂ ಲೋಕಸಭಾ ಕ್ಷೇತ್ರ ಮತ್ತು ಅಟ್ಟಿಂಗಲ್ ಲೋಕಸಭಾ ಕ್ಷೇತ್ರವನ್ನು ಕೇಂದ್ರೀಕರಿಸಿ ಪೋತನ್‍ಕೋಟ್ ಎನ್‍ಡಿಎ ಆಯೋಜಿಸಿರುವ ಮಹಾ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಎರಡೂ ಕ್ಷೇತ್ರಗಳಲ್ಲಿ ಕೇಂದ್ರ ಸಚಿವರುಗಳು ಭಾಗವಹಿಸುವರು. ಹಾಗಾಗಿ ಪ್ರಧಾನಿ ಭೇಟಿ ಮತದಾರರ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿದೆ ಎಂದು ಅಂದಾಜಿಸಲಾಗಿದೆ.

                ಪ್ರಧಾನಿಯವರ ಭೇಟಿಯು ರಾಜೀವ್ ಚಂದ್ರಶೇಖರ್ ಮತ್ತು ವಿ.ಮುರಳೀಧರನ್ ಅವರ ಚುನಾವಣಾ ಪ್ರಚಾರಕ್ಕೆ ಶಕ್ತಿ ತುಂಬಲಿದೆ. 15ರಂದು ಕುನ್ನಂಕುಳಂನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲೂ ಪ್ರಧಾನಿ ಭಾಗವಹಿಸುವರು. ಬಳಿಕ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ತಿರುವನಂತಪುರಕ್ಕೆ ಬರಲಿದ್ದಾರೆ.

                ತ್ರಿಶೂರ್ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ಸುರೇಶ್ ಗೋಪಿ ಪ್ರಚಾರ ಹಾಗೂ ಆಲತ್ತೂರು ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ಡಾ. ಟಿ.ಎನ್.ಸರಸು ಪರ ಪ್ರಚಾರವನ್ನೂ ಪ್ರಧಾನಿ ಮಾಡಲಿದ್ದಾರೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries