HEALTH TIPS

ಇಂದು ರಾತ್ರಿ 8 ಕ್ಕೆ ದೂರದರ್ಶನದಲ್ಲಿ 'ಕೇರಳ ಸ್ಟೋರಿ': ಹಲವು ವಾದ-ವಿವಾದಗಳ ಮಧ್ಯೆ ಪ್ರಭಾವ ಕುತೂಹಲ

                    ಭಾರತದಲ್ಲಿ ನಡೆಯುತ್ತಿರುವ ಭೀಕರ ಘಟನೆಯ ನೇರ ಚಿತ್ರಣವನ್ನು ವಿಶ್ವಕ್ಕೆ ಚಲನಚಿತ್ರವಾಗಿ ಪ್ರಸ್ತುತಪಡಿಸುವ ಮೂಲಕ ಭಾರೀ ಯಶಸ್ಸು ಗಳಿಸಿರುವ 'ಕೇರಳ ಸ್ಟೋರಿÉ' ಚಲಚಿತ್ರ ಇಂದು ರಾತ್ರಿ 8 ಗಂಟೆಗೆ ದೂರದರ್ಶನದಲ್ಲಿ ಪ್ರಸಾರವಾಗಲಿದೆ ಎಂದು ಸಮುದಾಯ ಪುಟದ ಮೂಲಕ ಪ್ರಕಟಿಸಲಾಗಿದೆ. 

                     ಇದರೊಂದಿಗೆ ಕೇರಳ ಇದು ಭಾರೀ ಪ್ರಭಾವಶಾಲಿಯಾಗಿ ಜನರನ್ನು ಯಾವ ರೀತಿ ಕೊಂಡೊಯ್ಯಲಿದೆ ಎಂಬುದು ಗಮನಾರ್ಹವಾಗಿದೆ. 

                        ಕೇರಳದ ವಿರುದ್ಧ ದ್ವೇಷ ಹರಡುವ ಉದ್ದೇಶದಿಂದ ನಿರ್ಮಾಣವಾಗಿರುವ ‘ಕೇರಳ ಸ್ಟೋರಿ’ ಸಿನಿಮಾವನ್ನು ಪ್ರದರ್ಶಿಸುವ ನಿರ್ಧಾರವನ್ನು ದೂರದರ್ಶನ ಕೂಡಲೇ ಹಿಂಪಡೆಯುವಂತೆ ಮುಖ್ಯಮಂತ್ರಿಗಳ ಹೇಳಿಕೆ ಹೊರಬಿದ್ದಿದೆ.

                     ಚುನಾವಣಾ ಸಂದರ್ಭದಲ್ಲಿ ಕೇರಳವನ್ನು ಕೀಳಾಗಿ ಕಾಣಲು ದೇಶದ ಅಧಿಕೃತ ಸುದ್ದಿ ಪ್ರಸಾರಕರನ್ನು ಬಳಸುವುದನ್ನು ಕೇಂದ್ರ ಸರ್ಕಾರ ತಡೆಯಬೇಕು. ಕೇರಳವು ವಿವಿಧ ಧಾರ್ಮಿಕ ಗುಂಪುಗಳಿಗೆ ಸೇರಿದ ಜನರು ಪರಸ್ಪರ ಸಹೋದರತೆಯಿಂದ ಒಟ್ಟಿಗೆ ವಾಸಿಸುವ ಪ್ರದೇಶವಾಗಿದೆ. ಜಗತ್ತಿನ ಮುಂದೆ ತಲೆ ಎತ್ತಿ ನಿಂತಿರುವ ಕೇರಳವನ್ನು ಅಪಹಾಸ್ಯ ಮಾಡುವ, ಧಾರ್ಮಿಕ ವೈಷಮ್ಯವನ್ನು ಬೆಳೆಸುವ ಉದ್ದೇಶದಿಂದ ಸಂಘಪರಿವಾರದ ಮನಸ್ಸಿನಲ್ಲಿ ಹುಟ್ಟಿಕೊಂಡ ಹೇಸಿಗೆಯ ಉತ್ಪನ್ನ ಈ ಚಿತ್ರ ಎಂದು ಸ್ವತಃ ಮುಖ್ಯಮಂತ್ರಿ ತಿಳಿಸಿದ್ದಾರೆ.

                 ಕಡು ಬಡತನ ನಿರ್ಮೂಲನೆಯಲ್ಲಿ ದೇಶಕ್ಕೆ ಮಾದರಿಯಾಗಿರುವ, ನೀತಿ ಆಯೋಗ ಸೇರಿದಂತೆ ನಾನಾ ಸೂಚಕಗಳಲ್ಲಿ ಮುಂಚೂಣಿಯಲ್ಲಿರುವ ಕೇರಳವನ್ನು ಸೊಮಾಲಿಯಾ ಎಂದು ಟೀಕಿಸುತ್ತಿರುವರು. ಈಗ ಧಾರ್ಮಿಕ ಮತಾಂತರದ ಕೇಂದ್ರ ಕೇರಳ ಎಂದು ಬಿಂಬಿಸುವ ರಹಸ್ಯ ಪ್ರಯತ್ನ ನಡೆಯುತ್ತಿದೆ. ಸಂಘಪರಿವಾರದ ಸುಳ್ಳು ಮತ್ತು ದ್ವೇಷವನ್ನು ಆಧರಿಸಿದ ಚಿತ್ರದ ವಿರುದ್ಧ ಈಗಾಗಲೇ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ದೂರದರ್ಶನದಂತಹ ಸಾರ್ವಜನಿಕ ವಲಯದ ಸಂಸ್ಥೆಯು ಸಂಘ ಪರಿವಾರದ ಕೋಮುವಾದಿ ಅಜೆಂಡಾದ ಪ್ರಕಾರ ಕಾರ್ಯನಿರ್ವಹಿಸುವ ಕೈಗೊಂಬೆಯಾಗಬಾರದು. ದೂರದರ್ಶನ ಬಿಜೆಪಿ ಅಭ್ಯರ್ಥಿಗಳಿಗೆ ಕೋಮು ಪ್ರಚಾರ ಮಾಡುವ ಸಂಸ್ಥೆ ಅಲ್ಲ ಎಂದು ಮುಖ್ಯಮಂತ್ರಿ ಬೊಟ್ಟುಮಾಡಿರುವರು.

                  ಏಪ್ರಿಲ್ 5ರಂದು ಈ ಸಿನಿಮಾ ಪ್ರಸಾರವಾಗಲಿದೆ ಎಂದು ಘೋಷಣೆ ಮಾಡಿರುವುದು ಇಡೀ ಕೇರಳಕ್ಕೆ ಅವಮಾನ ಮಾಡಿದಂತೆ. ಕೋಮು ಧ್ರುವೀಕರಣದ ಇಂತಹ ವಿಧ್ವಂಸಕ ನಡೆಗಳ ವಿರುದ್ಧ ಜಾತ್ಯತೀತ ಕೇರಳ ಒಗ್ಗಟ್ಟಾಗಿ ನಿಲ್ಲಲಿದೆ ಎಂಬುದು ಮುಖ್ಯಮಂತ್ರಿಗಳ ಹೇಳಿಕೆ.

                 ಇಡೀ ಕೇರಳದ ಜನತೆಯನ್ನು ಅವಮಾನಿಸುವ ಕೇರಳ ಸ್ಟೋರಿ ಸಿನಿಮಾವನ್ನು ಪ್ರದರ್ಶಿಸುವ ಕ್ರಮದಿಂದ ದೂರದರ್ಶನ ಹಿಂದೆ ಸರಿಯುವಂತೆ ಸಿಪಿಐಎಂ ರಾಜ್ಯ ಕಾರ್ಯದರ್ಶಿಯೂ ಹೇಳಿಕೆ ನೀಡಿ ಒತ್ತಾಯಿಸಿದ್ದಾರೆ.

                ವಿವಿಧ ಧಾರ್ಮಿಕ ಗುಂಪುಗಳು ಸೌಹಾರ್ದತೆಯಿಂದ ಬದುಕುತ್ತಿರುವ ಕೇರಳದಲ್ಲಿ ಮತೀಯವಾದವನ್ನು ಬಿತ್ತುವ ಬಿಜೆಪಿಯ ಪ್ರಯತ್ನಕ್ಕೆ ದೂರದರ್ಶನದಂತಹ ಸಾರ್ವಜನಿಕ ವಲಯದ ಮಾಧ್ಯಮ ಸಂಸ್ಥೆಯು ಸಹಕರಿಸಬಾರದು. ಇಂದು Áತ್ರಿ 8 ಗಂಟೆಗೆ ಚಿತ್ರ ಪ್ರಸಾರವಾಗಲಿದೆ ಎಂದು ತಿಳಿಸಲಾಗಿದೆ. ಇದು ಕೇರಳಕ್ಕೆ ಸವಾಲಾಗಿದೆ. ಚಿತ್ರ ಬಿಡುಗಡೆಯಾದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ‘32,000 ಮಹಿಳೆಯರು ಭಯೋತ್ಪಾದನೆಗೆ ಮತಾಂತರಗೊಂಡರು’ ಎಂಬ ಸುದ್ದಿಯನ್ನು ಟ್ರೇಲರ್‍ನಲ್ಲಿ ಬಿತ್ತರಿಸಿದಾಗ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.

                  ಹತ್ತು ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯಬೇಕು ಎಂದು ಸ್ವತಃ ಸೆನ್ಸಾರ್ ಮಂಡಳಿಯೇ ಸೂಚಿಸಿದ ಚಿತ್ರ ಇದಾಗಿದೆ. ಚಿತ್ರವು ಕಮ್ಯುನಿಸ್ಟ್ ಪಕ್ಷಗಳು ಮತ್ತು ನಾಯಕರನ್ನು ಕೆಟ್ಟದಾಗಿ ಚಿತ್ರಿಸುತ್ತದೆ ಮತ್ತು ಕೇರಳವು ಭಯೋತ್ಪಾದಕರ ಸ್ವರ್ಗವಾಗಿದೆ ಎಂಬ ಸುಳ್ಳು ಪ್ರಚಾರವನ್ನು ತೆಗೆದುಕೊಳ್ಳುತ್ತಿದೆ ಎಂಬುದು ಎಡರಂಗದ ಭಯ.

                     ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಉದ್ದೇಶ ಇಟ್ಟುಕೊಂಡು ಬಿಜೆಪಿ ನಡೆಸುತ್ತಿರುವ ನಡೆ ಚಿತ್ರ ದಿಢೀರ್ ಬಿಡುಗಡೆಗೆ ಕಾರಣ. ಯಾವ ಕ್ಷೇತ್ರದಲ್ಲೂ ಬಿಜೆಪಿಗೆ ಮುನ್ನಡೆಯಲು ಸಾಧ್ಯವಾಗಿಲ್ಲ ಎಂಬ ವಾಸ್ತವವೂ ಇದೆ. ಹೀಗಿರುವಾಗ ದೂರದರ್ಶನ ಕೋಮು ವಿಷವನ್ನು ಉಗುಳುವ ಸಿನಿಮಾವನ್ನು ತೆರೆಗೆ ತರಲು ಮುಂದಾಗಿದೆ. ಇಂತಹ ನಡೆಗಳ ವಿರುದ್ಧ ಜಾತ್ಯತೀತ ಕೇರಳ ಜಾಗರೂಕತೆಯಿಂದ ರಕ್ಷಿಸುತ್ತದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

                    ಏತನ್ಮಧ್ಯೆ, ಜಗತ್ತನ್ನು ನಡುಗಿಸಿದ ಕೇರಳದ ಕಥೆಯನ್ನು ದೂರದರ್ಶನ ಎಕ್ಸ್‍ನಲ್ಲಿ “ನಿಮ್ಮ ಮುಂದೆ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.

                       ಈ ಚಿತ್ರವನ್ನು ಸುದೀಪೆÇ್ತೀ ಸೇನ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಬಾಲಿವುಡ್ ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ ಮತ್ತು ಅದಾ ಶರ್ಮಾ ನಾಯಕಿಯಾಗಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನವೇ ಹುಸಿ ಸೆಕ್ಯುಲರ್ ಸಮುದಾಯ ವಿವಾದ ಸೃಷ್ಟಿಸಲು ಯತ್ನಿಸಿತ್ತು. ಇದರ ಪರಿಣಾಮವಾಗಿ ಕೇರಳ, ಬಂಗಾಳ ಮತ್ತಿತರ ಕಡೆಗಳಲ್ಲಿ ಧಾರ್ಮಿಕ ಪೈಪೋಟಿ ಹುಟ್ಟು ಹಾಕುವ ಪ್ರಚಾರದ ಕೆಲಸ ನಡೆದಿದೆ.ಕಥೆ ಕೇಳಿದ ಜನ ಸಿನಿಮಾವನ್ನು ಮುಕ್ತಕಂಠದಿಂದ ಒಪ್ಪಿಕೊಂಡಿದ್ದಾರೆ.

                   ಹಲವು ಸಮಸ್ಯೆಗಳ ನಡುವೆಯೂ ಚಿತ್ರ ಕಳೆದ ವರ್ಷ ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಫೆಬ್ರವರಿ 16 ರಂದು, ಚಿತ್ರವು ಝೀ 5 ಮೂಲಕ ಒಟಿಟಿ ಯಲ್ಲಿ ಬಿಡುಗಡೆಯಾಯಿತು. ಆರಂಭದಲ್ಲಿ ಒಟಿಟಿ ಪ್ಲಾಟ್‍ಫಾರ್ಮ್‍ಗಳು ಚಲನಚಿತ್ರವನ್ನು ತೆಗೆದುಕೊಳ್ಳಲು ಇಷ್ಟಪಟ್ಟಿರಲಿಲ್ಲ, ಅವರು ರಾಜಕೀಯ ವಿವಾದಗಳಲ್ಲಿ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದರು.

                ಥಿಯೇಟರ್‍ಗಳಿಗೆ ಬಂದಾಗ, ಚಿತ್ರವು ಟೀಕೆಗಳ ಹೊರತಾಗಿಯೂ ಬಾಕ್ಸ್ ಆಫೀಸ್‍ನಲ್ಲಿ ದೊಡ್ಡ ಯಶಸ್ಸನ್ನು ಕಂಡಿತು. 30 ಕೋಟಿ ಬಜೆಟ್‍ನಲ್ಲಿ ತಯಾರಾದ ಚಿತ್ರವು ದೇಶೀಯ ಮಾರುಕಟ್ಟೆಯಲ್ಲಿ ಸುಮಾರು 238 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಚಿತ್ರದ ವಿಶ್ವಾದ್ಯಂತ ಒಟ್ಟು 303.97 ಕೋಟಿ ಸಂಗ್ರಹದೊಂದಿಗೆ, ಇದು 2023 ರಲ್ಲಿ ಎಂಟನೇ ಅತಿ ಹೆಚ್ಚು ಗಳಿಸಿದ ಹಿಂದಿ ಚಲನಚಿತ್ರವಾಯಿತು.

                     ಚಿತ್ರವು ಮೂವರು ಹುಡುಗಿಯರ ಕಥೆಯನ್ನು ಹೇಳುತ್ತದೆ. ಈ ಮೂವರು ಹುಡುಗಿಯರು ತಮ್ಮ ರೂಮ್‍ಮೇಟ್ ಆಸಿಫಾ (ಸೋನಿಯಾ ಬಾಲಾನಿ) ಪ್ರಚೋದನೆಯಿಂದ ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಚಿತ್ರ ತೋರಿಸುತ್ತದೆ. ಮೊದಲಾರ್ಧದಲ್ಲಿ ಹುಡುಗಿಯರು ಹೇಗೆ ಮತಾಂತರಗೊಳ್ಳುತ್ತಾರೆ ಮತ್ತು ದ್ವಿತೀಯಾರ್ಧದಲ್ಲಿ ಶಾಲಿನಿ ಹೇಗೆ ಫಾತಿಮಾ ಆಗುತ್ತಾಳೆ ಮತ್ತು ಅಫ್ಘಾನಿಸ್ತಾನದ ಜೈಲಿನಲ್ಲಿ ಭಯೋತ್ಪಾದಕ ಗುಂಪಿನ ಸದಸ್ಯಳಾಗುತ್ತಾಳೆ ಎಂಬುದನ್ನೆಲ್ಲ ಪ್ರತಿಬಿಂಬಿಸಿದೆ.  



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries