ನವದೆಹಲಿ: ಬಾಹ್ಯಾಕಾಶ ಕಣ್ಗಾವಲು ಉಪಗ್ರಹವನ್ನು ಉಡಾಯಿಸಲು ಬೆಂಗಳೂರಿನಲ್ಲಿ ಸಜ್ಜುಗೊಂಡಿರುವ ಬಾಹ್ಯಾಕಾಶ ವಲಯದ ಸ್ಟಾರ್ಟ್ ಅಪ್ 'ದಿಗಂತರ'ದ ಜಾಗತಿಕ ಪ್ರಧಾನ ಕಚೇರಿಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಶುಕ್ರವಾರ ಉದ್ಘಾಟಿಸಿದರು.
0
samarasasudhi
ಏಪ್ರಿಲ್ 20, 2024
ನವದೆಹಲಿ: ಬಾಹ್ಯಾಕಾಶ ಕಣ್ಗಾವಲು ಉಪಗ್ರಹವನ್ನು ಉಡಾಯಿಸಲು ಬೆಂಗಳೂರಿನಲ್ಲಿ ಸಜ್ಜುಗೊಂಡಿರುವ ಬಾಹ್ಯಾಕಾಶ ವಲಯದ ಸ್ಟಾರ್ಟ್ ಅಪ್ 'ದಿಗಂತರ'ದ ಜಾಗತಿಕ ಪ್ರಧಾನ ಕಚೇರಿಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಶುಕ್ರವಾರ ಉದ್ಘಾಟಿಸಿದರು.
ಬೆಂಗಳೂರಿನ ಹೆಬ್ಬಾಳದಲ್ಲಿ 25 ಸಾವಿರ ಚದರಡಿ ವಿಸ್ತೀರ್ಣದಲ್ಲಿರುವ ಪ್ರಧಾನ ಕಚೇರಿಯು ಉಪಗ್ರಹ ಜೋಡಣೆ, ಸಮಗ್ರೀಕರಣ ಮತ್ತು ಪರೀಕ್ಷೆ (ಎಐಟಿ) ಸೌಲಭ್ಯ ಹಾಗೂ ಸಮಗ್ರ ಬಾಹ್ಯಾಕಾಶದ ಅಧಿಪತ್ಯದ ಕುರಿತು ಜಾಗೃತಿ ಮೂಡಿಸುವ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಒಳಗೊಂಡಿದೆ.
'ಈ ಸೌಲಭ್ಯವು ಬಾಹ್ಯಾಕಾಶದಲ್ಲಿ ಉಪಗ್ರಹಗಳ ಸಂಚಾರದ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು, ಜಗತ್ತಿನಾದ್ಯಂತ ಉಪಗ್ರಹ ಕಾರ್ಯಾಚರಣೆಗಳ ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ' ಎಂದು 'ದಿಗಂತರ' ಹೇಳಿಕೆಯಲ್ಲಿ ತಿಳಿಸಿದೆ.