HEALTH TIPS

ಕರ್ತವ್ಯ ಬಹಿಷ್ಕರಿಸಿದ ರಾಹುಲ್ ಗಾಂಧಿ ಮತ್ತು ಗೋವಾ ರಾಜ್ಯಪಾಲರ ನಿಯೋಜಿತ ವೈದ್ಯರು

                  ಕೋಝಿಕ್ಕೋಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಗೋವಾ ರಾಜ್ಯಪಾಲ ಪಿ. ಶ್ರೀಧರನ್ ಪಿಳ್ಳೈ ಅವರ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಆರೋಗ್ಯ ಕಾರ್ಯಕರ್ತರ ಗುಂಪಿನ ವೈದ್ಯರೂ ಕೆಲಸ ಬಹಿಷ್ಕರಿಸಿದ್ದಾರೆ. ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘದ ಸೂಚನೆಯಂತೆ ಈ ಬಹಿಷ್ಕಾರ ನಡೆದಿದೆ ಎಂದು ತಿಳಿದುಬಂದಿದೆ.

             ವೈದ್ಯರಿಗೆ ಅಗತ್ಯ ಸೌಲಭ್ಯ ಕಲ್ಪಿಸದಿರುವುದನ್ನು ವಿರೋಧಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಐಪಿಗಳಿಗಾಗಿ ಕೋಝಿಕ್ಕೋಡ್ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯರನ್ನು ನೇಮಿಸಲಾಗಿತ್ತು. ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರ ವೈದ್ಯಕೀಯ ತಂಡದಲ್ಲಿ ಕೆ.ಜಿ.ಎಂ.ಒ.ಎ. ರಾಜ್ಯಾಧ್ಯಕ್ಷ ಡಾ. ಟಿ.ಎನ್. ಸುರೇಶ್ ಒಳಗೊಂಡಿದ್ದರು. ರಾಹುಲ್ ಗಾಂಧಿಗಾಗಿ ನೇಮಿಸಿದ ತಂಡದಲ್ಲಿ ಡಾ. ಷಹಜಹಾನ್, ಡಾ. ಅಬ್ದುಲ್ ಸಲೀಂ, ಡಾ. ಎನ್.ಕೆ. ಬಿಂದುಮೋಳ್ ಭಾಗಿಗಳಾಗಿದ್ದರು. 

           ಸೌಲಭ್ಯ ನೀಡುವಂತೆ ಈ ಹಿಂದೆ ಅಧಿಕಾರಿಗಳಿಗೆ ನೀಡಿದ ಪತ್ರದ ಬೇಡಿಕೆಗಳನ್ನು ಈಡೇರಿಸದ ಕಾರಣ ಬಹಿಷ್ಕಾರ ಹಾಕಬೇಕು ಎಂದು ಡಾ. ಟಿ.ಎನ್. ಸುರೇಶ್ ಮಾಹಿತಿ ನೀಡಿದರು. ವಿಐಪಿಗಳ ವಾಹನ ಯಾತ್ರೆಗೆ ವೈದ್ಯರು ಆಂಬ್ಯುಲೆನ್ಸ್ ಹೊರತುಪಡಿಸಿ ಬೇರೆ ವಾಹನದ ವ್ಯವಸ್ಥೆ ಮಾಡಬೇಕು ಎಂಬ ಸುತ್ತೋಲೆಯನ್ನು ಜಾರಿಗೊಳಿಸಬೇಕು ಮತ್ತು ಕರ್ತವ್ಯದ ಮಾಹಿತಿಯನ್ನು ಕನಿಷ್ಠ ಐದು ದಿನ ಮುಂಚಿತವಾಗಿ ವಿಐಪಿಗಳಿಗೆ ತಿಳಿಸಬೇಕು. ಕೆಜಿಎಂಒಎ ಕರ್ತವ್ಯ ಬಹಿಷ್ಕಾರ ಮಾಡುವುದಾಗಿ ಘೋಷಿಸಿತು. ರಾಜ್ಯಾಧ್ಯಕ್ಷ ಟಿ.ಎನ್. ಸುರೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಸುನೀಲ್ ಅವರು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಡಿಜಿಪಿ, ಮಾನವ ಹಕ್ಕು ಆಯೋಗ ಮತ್ತು ಆರೋಗ್ಯ ಇಲಾಖೆ ಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದಾರೆ.

           ವಿ.ಐ.ಪಿ. ಕರ್ತವ್ಯಕ್ಕೆ ಹೋಗುವ ಸಮಯ ಮತ್ತು ಸ್ಥಳದಲ್ಲಿ, ವಿಶ್ರಾಂತಿಗಾಗಿ ಕೊಠಡಿ ಅಥವಾ ಆಹಾರ ಲಭಿಸುತ್ತಿಲ್ಲ. ಅಲ್ಲದೆ ಪ್ರಯಾಣಿಸಲು ಉತ್ತಮ ವಾಹನವಾಗಲಿ, ಶೈತ್ಯೀಕರಿಸಿದ ಆಂಬ್ಯುಲೆನ್ಸ್ ಆಗಲಿ ಸಿಗುತ್ತಿಲ್ಲ ಎನ್ನುತ್ತಾರೆ ವೈದ್ಯರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries