HEALTH TIPS

ನಟ ಶ್ರೀನಿವಾಸನ್ ರಿಗೆ ತಪಸ್ಯ ಮಾದಂಬ ಪ್ರಶಸ್ತಿ

               ತಿರುವನಂತಪುರಂ: ನಟ ಹಾಗೂ ಚಿತ್ರಕಥೆಗಾರ ಶ್ರೀನಿವಾಸನ್ ಅವರಿಗೆ ತಪಸ್ಯ ಮದಂಬಾ ಪ್ರಶಸ್ತಿ ಘೋಷಿಸಲಾಗಿದೆ. ಮಲಯಾಳಂ ಚಲನಚಿತ್ರ ಸಾಹಿತ್ಯಕ್ಕೆ ಶ್ರೀನಿವಾಸನ್ ನೀಡಿದ ಮಹತ್ತರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. 

               ಪ್ರಶಸ್ತಿಯು ರೂ 25,000 ಗೌರವಧನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ  ಒಳಗೊಂಡಿದೆ. ಮೇ ತಿಂಗಳಲ್ಲಿ ತ್ರಿಶೂರ್‍ನಲ್ಲಿ ನಡೆಯಲಿರುವ ಮಾದಂಬ ಸ್ಮರಣೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಿರ್ದೇಶಕ ವಿಜಯ್ ಕೃಷ್ಣನ್, ನಟ ಅಶೋಕನ್, ತಪಸ್ಯ ರಾಜ್ಯಾಧ್ಯಕ್ಷ ಪ್ರೊ. ಪಿ.ಜಿ.ಹರಿದಾಸ್ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿಯು ಪ್ರಶಸ್ತಿಯನ್ನು ನಿರ್ಧರಿಸಿತು. ತಪಸ್ಯ ಮಾದಾಂಬ ಸ್ಮೃತಿ ಪ್ರಶಸ್ತಿಯು ತಪಸ್ಯ ಕಲಾಸಾಹಿತ್ಯ ವೇದಿಕೆಯು ಮಾಜಿ ರಾಜ್ಯಾಧ್ಯಕ್ಷೆ ಹಾಗೂ ಲೇಖಕಿ ಮಾದಾಂಬ ಕುಂಞÂ್ಞ ಕುಟ್ಟನ್ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries