ಕಾಸರಗೋಡು: ಕಲೆ ವ್ಯಕ್ತಿತ್ವ ಅರಳಿಸುವ ಕಾರ್ಯದೊಂದಿಗೆ ಸೂಕ್ಷ್ಮ ಪ್ರಜ್ಞೆಯನ್ನು ಬೆಳೆಸುತ್ತದೆ ಎಂಬುದಾಗಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ತಿಲಿಸಿದ್ದಾರೆ.ಅವರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರ ಗುರುತ್ವದಲ್ಲಿ ಪುತ್ತೂರಿನ ನಾಟ್ಯರಂಗದ ಎಡನೀರು ಶಾಖೆಯ ವಿದ್ಯಾರ್ಥಿನಿಯರಾದ ಮಧುಶ್ರೀ, ದೇವನಂದ, ಶ್ರೀನಂದ ಹಾಗೂ ನೃತ್ಯ ಗುರುಗಳ ಸಮನ್ವಯದಲ್ಲಿ ಎಡನೀರು ಮಠದ ಭಾರತೀ ಕಲಾಸದನದಲ್ಲಿ 'ನೃತ್ಯಾವತರಣಂ ಪ್ರಸ್ತುತಿ'ಕಾರ್ಯಕ್ರಮ ಉದ್ಘಾಟಿಸಿ ಅಶಿರ್ವಚನ ನೀಡಿದರು.
ಕೇರಳ ರಾಜ್ಯ ಬಯೋಡೈವರ್ಸಿಟಿ ಬೋರ್ಡ್ ಮೆಂಬರ್ ಸೆಕ್ರೆಟರಿ, ಡಿವೈಎಸ್ಪಿ ಡಾ. ಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ "ಮಠದ ಆಶ್ರಯವು ತಮ್ಮ ಬದುಕಿನಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದು ಪ್ರಸಕ್ತ ಸನ್ನಿವೇಶಗಳಲ್ಲಿ ಕಲಾವಿದರನ್ನು ಸೃಷ್ಟಿಸುವಷ್ಟೇ ಆದ್ಯತೆ ಹಾಗೂ ಪ್ರಾಮುಖ್ಯತೆ ಕಲಾ ಆಸ್ವಾಧಕರನ್ನು ಸೃಷ್ಟಿಸುವಲ್ಲಿ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿರು. ವಿದುಷಿ ಅನುಪಮಾ ರಾಘವೇಂದ್ರ ಅತಿಥಿಯಾಗಿ ಭಾಗವಹಿಸಿದ್ದರು.
ಕಲಾ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಪ್ರಾರ್ಥನೆ ಹಾಡಿದರು. ನೃತ್ಯ ಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಕಲಾವಿದರಿಗೆ ಅಭಿನಂದನ ಪತ್ರ ನೀಡಿ ಹರಸಿದರು. ನಾಟ್ಯ ರಂಗದ ಪೆÇೀಷಕರಾದ ಆಶಾ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಮೇಘಶ್ರೀ ವಂದಿಸಿದರು.
ಈ ಸಂದರ್ಭ ಗಣೇಶ ಸ್ತುತಿ ,ಪುಷ್ಪಾಂಜಲಿ, ಕವಿ ಜಯದೇವ ವಿರಚಿತ ಗೀತ ಗೋವಿಂದ, ಜತಿಸ್ವರ, ಶಿವಸ್ತುತಿ, ದೇವರ ನಾಮ, ಸೂರದಾಸ ಭಜನ್ ಪ್ರಸ್ತುತಿಗೊಂಡಿತು.