HEALTH TIPS

ನೆಲಮೂಲ ಅಧ್ಯಯನದ ಜತೆಗೆ ಭಾಷೆ, ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮದಾಗಬೇಕು-ತಾರನಾಥ ಗಟ್ಟಿ ಕಾಪಿಕಾಡು

                  ಕಾಸರಗೋಡು : ನೆಲಮೂಲ ಅಧ್ಯಯನದ ಜತೆಗೆ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡು ತಿಳಿಸಿದ್ದಾರೆ. 

                ಅವರು ಅವರು ಬಾರಡ್ಕದಲ್ಲಿ ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ನಡೆದ ನವಪುರ ದ್ರಾವಿಡ ಭಾಷಾ ಸಾಹಿತ್ಯ ಪುರಸ್ಕೃತ ಕವಿ ಸುಂದರ ಬಾರಡ್ಕ ಅವರಿಗೆ  ಏರ್ಪಡಿಸಿದ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

              ದಲಿತ ಜಗತ್ತಿನ ಬೆಡಗು ಮತ್ತು ಬೆರಗನ್ನು ತಮ್ಮಕೃತಿಯ ಮೂಲಕ  ಅಭಿವ್ಯಕ್ತಿಸಿ  ತಮ್ಮ ಕೃತಿಯ ಮೂಲಕ ಸಾಹಿತ್ಯ ಲೋಕದಲ್ಲಿ ವಿಶೇಷ ಸ್ಥಾನ ಪಡೆದಿರುವುದು ಅಭಿಮಾನದ ವಿಷಯ ಎಂದು ತಿಳಿಸಿದರು. ಡಾ.ಶ್ರಿನಿಧಿ ಸರಳಾಯ ಬದಿಯಡ್ಕ ಸಮಾರಂಬ ಉದ್ಘಾಟಿಸಿದರು, ಹಿರಿಯ ಸಾಹಿತಿ ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕೇರಳ ಕೇಂದ್ರೀಯ ವಿವಿ ಪೆರಿಯ ಕ್ಯಾಂಪಸ್‍ನ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಸೌಮ್ಯ ಎಚ್ ಮುಖ್ಯ ಅತಿಥಿಗಳಾಗಿದ್ದರು. ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಆಶಾಲತಾ ಸಿ.ಕೆ ಅಭಿನಂದನಾ ಭಾಷಣ ಮಾಡಿದರು. 

              ಅಖಿಲೇಶ್ ನಗುಮುಗಂ, ಶಂಕರ ಕನಕಪ್ಪಾಡಿ, ಸತ್ಯರಾಜ್ ಬಿ, ನಿರಂಜನ ಬಾರಡ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಕವಿ, ಪತ್ರಕರ್ತ ರವೀಂದ್ರನ್ ಪಾಡಿ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿ ಸಂಗಮ ನಡೆಯಿತು. ಕವಿ, ವ್ಯಂಗ್ಯಚಿತ್ರಕಾರ ವೆಂಕಟ್ ಭಟ್ ಎಡನೀರು ಉದ್ಘಾಟಿಸಿದರು. ಹಲವು ಮಂದಿ ಕವಿಗಳು ಕವನ ವಾಚನಗೈದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries