HEALTH TIPS

ಬಾಲಕಿಯನ್ನು ಅಪಹರಿಸಿ ಕಿರುಕುಳ ನೀಡಿದ ಘಟನೆ: ಆರೋಪಿಯ ಡಿಎನ್‍ಎ ಪರೀಕ್ಷೆ ನಡೆಸಲು ತೀರ್ಮಾನಿಸಿದ ತನಿಖಾ ತಂಡ

                  ಕಾಸರಗೋಡು: ಕಾಞಂಗಾಡ್‍ನ 10 ವರ್ಷದ ಬಾಲಕಿಯನ್ನು ಅಪಹರಿಸಿ ಕಿರುಕುಳ ನೀಡಿ ಚಿನ್ನಾಭರಣ ಕದ್ದ ಆರೋಪಿ ಪಿ.ಎ.ಸಲೀಂನ ಡಿಎನ್‍ಎ ಪರೀಕ್ಷೆಗೆ ತನಿಖಾ ತಂಡ ಮುಂದಾಗಿದೆ.

                 ಮಗುವಿಗೆ ಕಿರುಕುಳ ನೀಡಿದ ಆರೋಪಿಯೇ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲು ಡಿಎನ್‍ಎ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊಡಗು ಮೂಲದ ಸಲೀಂನ ರಕ್ತ ಮತ್ತು ಕೂದಲನ್ನು ಸಂಗ್ರಹಿಸಲು ಹೊಸದುರ್ಗ ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು.

                ಬಂಧಿತ ಆರೋಪಿಗೆ ನಾಳೆ ಕಸ್ಟಡಿಗೆ ಅರ್ಜಿ ಸಲ್ಲಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ. ತನಿಖಾ ತಂಡ ಆರೋಪಿಯನ್ನು 5 ದಿನಗಳ ಕಾಲ ಕಸ್ಟಡಿಗೆ ಕೇಳಲಿದೆ. 14 ದಿನಗಳ ಕಾಲ ರಿಮಾಂಡ್ ನೀಡಲಾಗಿದೆ. ಆಂಧ್ರ ಕರ್ನೂರ್ ಜಿಲ್ಲೆಯ ಅದೋನಿ ರೈಲು ನಿಲ್ದಾಣದಿಂದ ಪೆÇಲೀಸರು ಸಲೀಂನನ್ನು ಬಂಧಿಸಿದ್ದರು. ನಿನ್ನೆ ಕಾಞಂಗಾಡ್ ಗೆ ಕರೆತಂದು ಆರೋಪಿಯ ಬಂಧನವನ್ನು ದಾಖಲಿಸಲಾಗಿದೆ.

              ಈತ ಈ ಹಿಂದೆ ಕಳ್ಳತನ ಮಾಡಿರುವುದು ಪೋಲೀಸರಿಗೆ ಪತ್ತೆಯಾಗಿದೆ. ಇದರ ಆಧಾರದ ಮೇಲೆ ಆತನ ವಿರುದ್ಧ ಇನ್ನೂ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಸದ್ಯ ಈತನ ವಿರುದ್ಧ ಸಂಬಂಧಿಯ ಹುಡುಗಿಗೆ ಕಿರುಕುಳ ನೀಡಿದ ಪ್ರಕರಣವಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries