HEALTH TIPS

ಉತ್ತರಾಖಂಡ: ಆರು ತಿಂಗಳ ಬಳಿಕ ಬಾಗಿಲು ತೆರೆದ ಬದರಿನಾಥ ದೇಗುಲ

          ಮೋಲಿ: ಉತ್ತರಾಖಂಡದ ಚಮೋಲಿಯಲ್ಲಿರುವ ಬದರಿನಾಥ ದೇವಾಲಯದ ಬಾಗಿಲನ್ನು ಇಂದು (ಭಾನುವಾರ) ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು.

            ಈ ವೇಳೆ ವೇದ ಘೋಷಗಳು ಮತ್ತು ನೆರೆದಿದ್ದ ನೂರಾರು ಭಕ್ತರಿಂದ 'ಬದರಿ ವಿಶಾಲ್ ಲಾಲ್ ಕೀ ಜೈ' ಘೋಷಣೆಗಳು ಪ್ರತಿಧ್ವನಿಸಿದವು.

              ಆರು ತಿಂಗಳ ಬಳಿಕ ಬದರಿನಾಥ ದೇವಾಲಯವನ್ನು ಇಂದು ಭಕ್ತರ ದರ್ಶನಕ್ಕೆ ತೆರೆಯಲಾಗಿದ್ದು, ದೇಗುಲವನ್ನು ಹೂವುಗಳಿಂದ ಅಲಂಕರಿಸಲಾಗಿದೆ.

             ನವೆಂಬರ್ 18 ರಂದು ಚಳಿಗಾಲದ ಆರಂಭದಲ್ಲಿ ದೇವಾಲಯದ ದ್ವಾರಗಳನ್ನು ಮುಚ್ಚಲಾಗಿತ್ತು.


             ಉತ್ತರಾಖಂಡದ ನಾಲ್ಕು ಧಾಮಗಳ ಪೈಕಿ ಮೂರು ಧಾಮಗಳಾದ ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಧಾಮಗಳ ಬಾಗಿಲುಗಳನ್ನು ಕಳೆದ ಶುಕ್ರವಾರ ಅಕ್ಷಯ ತೃತೀಯ ಸಂದರ್ಭದಲ್ಲಿ ತೆರೆಯಲಾಗಿತ್ತು. ಇಂದು ಬದರಿನಾಥದಲ್ಲಿ ಬಾಗಿಲು ತೆರೆಯಲಾಗಿದ್ದು ಚಾರ್‌ಧಾಮಗಳಿಗೆ ಭಕ್ತರು ಭೇಟಿ ನೀಡಬಹುದಾಗಿದೆ.

                ಬದರಿನಾಥ ಯಾತ್ರೆಯು ಹಿಂದೂ ಧರ್ಮದಲ್ಲಿ ಪ್ರಮುಖವಾದ ತೀರ್ಥಯಾತ್ರೆಯಾಗಿದೆ. ಬದರಿನಾಥ ದೇಗುಲವು ಸಮುದ್ರ ಮಟ್ಟದಿಂದ 3,133 ಮೀಟರ್ (10,279 ಅಡಿ) ಎತ್ತರದಲ್ಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries