HEALTH TIPS

ಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ಯಾತ್ರಾರ್ಥಿಗಳ ದಂಡು: ತಾತ್ಕಾಲಿಕ ದೇಗುಲ ನಿರ್ಮಾಣ ಕಾರ್ಯ ಪೂರ್ಣ

              ಕೊಟ್ಟಿಯೂರು: ವೈಶಾಖ ಮಹೋತ್ಸವದ ಸಂಭ್ರಮದಲ್ಲಿರುವ ಕೊಟ್ಟಿಯೂರ್ ಕ್ಷೇತ್ರದಲ್ಲಿ ನಾಲ್ಕು ಆರಾಧನೆಗಳಲ್ಲಿ ಮೊದಲನೆಯದಾದ ತಿರುವೋಣಂ ಆರಾಧನೆ ಮೇ 29ರಂದು ನಡೆಯಲಿದೆ. ಇದಕ್ಕೂ ಮುನ್ನ ಪೂರ್ಣಗೊಳ್ಳಬೇಕಿದ್ದ ಮಣಿತ್ತರದಲ್ಲಿ ತಾತ್ಕಾಲಿಕ ದೇಗುಲ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.

               ಇದೇ ವೇಳೆ ಮಣಿತ್ತರ ಸಮೀಪದ ಅಕ್ಕರ ಕೊಟ್ಟಿಯೂರಿನಲ್ಲಿ ಉತ್ಸವಕ್ಕೆ ಬರುವ ಯಾತ್ರಾರ್ಥಿಗಳಿಗೆ ಪ್ರಸಾದ ವಿತರಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಭಕ್ತರಿಗೆ ಹೆಚ್ಚಿನ ಸಮಾಧಾನ ತಂದಿದೆ.


             ಉತ್ಸವದ ಆರಂಭವಾದ ನಂತರದ ಮೊದಲ ಭಾನುವಾರದ ದಿನ ಸಾಕಷ್ಟು ಸಡಗರದಿಂದ ಕೂಡಿತ್ತು. ಈ ನೂಕುನುಗ್ಗಲು ಪರಿಗಣಿಸಿ ನಿನ್ನೆ ನಡೆದ ತುರ್ತು ಸಭೆಯಲ್ಲಿ ಪ್ರಸಾದ ವಿತರಣೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ನಿರ್ಣಯ ಕೈಗೊಳ್ಳಲಾಗಿದೆ. ಹೊಸ ಪ್ರಸಾದ ಕೌಂಟರ್ ಆಗಮನದಿಂದ ಅಧಿಕಾರಿಗಳು ಮಣಿತ್ತರದಲ್ಲಿ ದರ್ಶನದ ದಟ್ಟಣೆಯನ್ನು ಸಾಕಷ್ಟು ಕಡಮೆ ಮಾಡಲು ಸಾಧ್ಯವಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries