HEALTH TIPS

ವಯನಾಡ್ ದುರಂತ ಸಂತ್ರಸ್ತರಿಗೆ ತಿಂಗಳಿಗೆ 6000 ರೂ.ಬಾಡಿಗೆ ಮಂಜೂರು

             ತಿರುವನಂತಪುರಂ: ವಯನಾಡ್ ಸಂತ್ರಸ್ತರಿಗೆ ಬಾಡಿಗೆ ಮನೆ ಮೊತ್ತವನ್ನು ನಿಗದಿಪಡಿಸಿ ಸರ್ಕಾರದ ಆದೇಶ ನೀಡಿದೆ. ತಿಂಗಳಿಗೆ 6000 ರೂ.ವರೆಗೆ ಬಾಡಿಗೆಗೆ ಅವಕಾಶ ನೀಡಲಾಗುತ್ತದೆ. ಸಂಬಂಧಿಕರ ಮನೆಗಳಿಗೆ ತೆರಳುವವರಿಗೂ ಈ ಮೊತ್ತ ಲಭ್ಯವಾಗಲಿದೆ.

              ಆದರೆ ಸರಕಾರಿ ಕಟ್ಟಡಗಳಿಗೆ ತೆರಳುವವರಿಗೆ ಬಾಡಿಗೆ ಲಭಿಸದು. ಖಾಸಗಿ ವ್ಯಕ್ತಿಗಳು ಉಚಿತವಾಗಿ ನೀಡಿದ ಕಟ್ಟಡಗಳಿಗೆ ಅಥವಾ ಪೂರ್ಣ ಪ್ರಾಯೋಜಕತ್ವದ ಮೂಲಕ ವಸತಿ ಪಡೆಯುವವರಿಗೆ ಬಾಡಿಗೆ ಸಿಗುವುದಿಲ್ಲ. ಆಂಶಿಕ ಪ್ರಾಯೋಜಕತ್ವ ಪಡೆದವರಿಗೆ ನೆರವು ಸಿಗಲಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

                   ಇದೇ ವೇಳೆ,  ವಯನಾಡ್ ಮುಂಡಕೈ ಮತ್ತು ಚುರಲ್ಮಲಾದಲ್ಲಿ ಭೂಕುಸಿತದ ನಂತರ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ಹರಿದುಬಂದಿತು. ಸದ್ಯ ಪರಿಹಾರ ನಿಧಿಗೆ ಒಟ್ಟು 110.55 ಕೋಟಿ ರೂ.ಲಭಿಸಿದೆ. ಅಧಿಕೃತ ವೆಬ್‍ಸೈಟ್ ಪ್ರಕಾರ, ಮಂಗಳವಾರವೊಂದರಲ್ಲೇ ಇದುವರೆಗೆ 55.5 ಲಕ್ಷ ರೂಪಾಯಿಗಳನ್ನು ಆನ್‍ಲೈನ್‍ನಲ್ಲಿ ದೇಣಿಗೆಯಾಗಿ ಸ್ವೀಕರಿಸಲಾಗಿದೆ. ಬಂದಿರುವ ಒಟ್ಟು 110 ಕೋಟಿ ಮೊತ್ತದಲ್ಲಿ ಇನ್ನೂ ನೆರವಿಗೆ ವರ್ಗಾವಣೆಯಾಗಿಲ್ಲ. ಇಲ್ಲಿ ಚಿತ್ರರಂಗ, ಸಂಸ್ಕøತಿ, ರಾಜಕೀಯ ಕ್ಷೇತ್ರದ ಅನೇಕರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries