ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಮೀಸಲಾತಿ ವಿರೋಧಿ ಪ್ರತಿಭಟನೆಯಲ್ಲಿ 650 ಮಂದಿ ಮೃತಪಟ್ಟ ಪ್ರಕರಣದ ಕುರಿತು ತನಿಖೆಯ ರೂಪುರೇಷೆ ಸಿದ್ಧಪಡಿಸಲು ತಜ್ಞರನ್ನು ಒಳಗೊಂಡ ತಂಡವು ಗುರುವಾರ ರಾಜಧಾನಿ ಢಾಕಾಗೆ ಬಂದಿಳಿಯಿತು.
0
samarasasudhi
ಆಗಸ್ಟ್ 23, 2024
ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಮೀಸಲಾತಿ ವಿರೋಧಿ ಪ್ರತಿಭಟನೆಯಲ್ಲಿ 650 ಮಂದಿ ಮೃತಪಟ್ಟ ಪ್ರಕರಣದ ಕುರಿತು ತನಿಖೆಯ ರೂಪುರೇಷೆ ಸಿದ್ಧಪಡಿಸಲು ತಜ್ಞರನ್ನು ಒಳಗೊಂಡ ತಂಡವು ಗುರುವಾರ ರಾಜಧಾನಿ ಢಾಕಾಗೆ ಬಂದಿಳಿಯಿತು.
'ದೌರ್ಜನ್ಯ ಕುರಿತು ತನಿಖೆ ನಡೆಸಲು ಪ್ರಾಥಮಿಕ ಹಂತವಾಗಿ ಈ ತಂಡವು ಬಂದಿಳಿದಿದೆ.
'ಜುಲೈ 1ರಿಂದ ಆಗಸ್ಟ್ 15ರ ತನಕ ನಡೆದ ಎಲ್ಲ ಮಾದರಿಯ ಮಾನವ ಹಕ್ಕುಗಳ ಉಲ್ಲಂಘನೆಯ ಬಗೆಗೆ ಹಾಗೂ ತನಿಖೆಗೆ ಪೂರಕವಾದ ನಿಯಮ-ಷರತ್ತುಗಳ ಕುರಿತಂತೆಯೂ ಮಧ್ಯಂತರ ಸರ್ಕಾರದ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದೆ.
ಒಂದು ವಾರ ತಂಡವು ಢಾಕಾದಲ್ಲಿಯೇ ಉಳಿಯಲಿದ್ದು, ನಾಗರಿಕ ಸಮಾಜದ ಗುಂಪುಗಳು, ಮಾನವ ಹಕ್ಕು ಉಲ್ಲಂಘನೆಯಿಂದ ನೊಂದ ವ್ಯಕ್ತಿಗಳು, ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದೆ' ಎಂದು ಅವರು ತಿಳಿಸಿದ್ದಾರೆ.
ತಂಡವು ಬಂದಿರುವುದನ್ನು ಬಾಂಗ್ಲಾದೇಶ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಕೂಡ ಖಚಿತಪಡಿಸಿದ್ದಾರೆ.