HEALTH TIPS

ಪಿಪಿ ದಿವ್ಯಾರ ಜಾಮೀನು ಅರ್ಜಿಯ ತೀರ್ಪು 29 ರಂದು

ಕಣ್ಣೂರು: ಎಡಿಎಂ ಕೆ.ನವೀನ್ ಬಾಬು ಸಾವಿಗೆ ಸಂಬಂಧಿಸಿದ ಪಿಪಿ ದಿವ್ಯಾ ಅವರ ಜಾಮೀನು ಅರ್ಜಿಯ ವಿಚಾರಣೆ ಇದೇ 29ರಂದು ನಡೆಯಲಿದೆ.

ತಲಶ್ಶೇರಿ ಪ್ರಧಾನ ಸೆಷÀನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೆ. ನಿಸಾರ್ ಅಹಮದ್ ಅವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸಿದ್ದಾರೆ. ಪ್ರಶಾಂತನ್ ಅವರು ವಿಜಿಲೆನ್ಸ್‍ಗೆ ನೀಡಿರುವ ದೂರು ಸುಳ್ಳು ಎಂದು ನವೀನ್ ಬಾಬು ಕುಟುಂಬದ ಪರ ವಕೀಲರು ನ್ಯಾಯಾಲಯದಲ್ಲಿ ಗಮನ ವಾದಿಸಿರುವರು. 

ಆದರೆ ವಿದಾಯ ಸಭೆಯಲ್ಲಿ ಹೇಳಿದ ಮಾತುಗಳು ಸದುದ್ದೇಶದಿಂದ ನಡೆದಿವೆ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ ಪಿ.ಪಿ.ದಿವ್ಯಾ ಅವರ ವಾದವನ್ನು ನ್ಯಾಯಾಲಯದಲ್ಲಿ ಸಾರ್ವಜನಿಕವಾಗಿಯೇ ಪ್ರತಿಕ್ರಯಿಸಿದಾಗ ಮಧ್ಯಪ್ರವೇಶಿಸುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ ಭ್ರಷ್ಟಾಚಾರದ ವಿರುದ್ಧದ ಸಂದೇಶ ಎಂದು ಭಾವಿಸಿ ಜನರು ಬಯಸಿದಂತೆ ಮಧ್ಯಪ್ರವೇಶಿಸಿದೆ ಎಂದಿರುವರು. 

ಆದರೆ ಪೆಟ್ರೋಲ್ ಪಂಪ್ ಮಂಜೂರಾತಿ ಜಿಲ್ಲಾ ಪಂಚಾಯತಿ ಅಧ್ಯಕ್ಷರ ವ್ಯಾಪ್ತಿಗೆ ಬರುವುದಿಲ್ಲ, ಹೀಗಿರುವಾಗ ದಿವ್ಯಾ ಮಧ್ಯಪ್ರವೇಶಿಸಿದ್ದು ಹೇಗೆ? ನವೀನ್ ಬಾಬು ಜತೆ ದಿವ್ಯಾರಿಗೆ ತೀವ್ರ ದ್ವೇಷವಿತ್ತು ಎಂದು ಕುಟುಂಬದವರು ನ್ಯಾಯಾಲಯದಲ್ಲಿ ವಾದ ಮಂಡಿಸಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries