HEALTH TIPS

ದೆಹಲಿ: ಕೆನಡಾಗೆ ಹೋಗಬೇಡ, ಮೊದಲು ಮದುವೆಯಾಗು ಎಂದದ್ದಕ್ಕೆ ತಾಯಿಯನ್ನೇ ಕೊಂದ ಮಗ

 ವದೆಹಲಿ: 'ಕೆನಡಾಗೆ ಹೋಗಬೇಡ. ಮೊದಲು ಮದುವೆಯಾಗು' ಎಂದ ತಾಯಿಯನ್ನು ಮಗನೊಬ್ಬ ಕೊಲೆ ಮಾಡಿರುವ ಘಟನೆ ದೆಹಲಿಯ ಬದರ್‌ಪುರ ಸಮೀಪದ ಮೊಲರ್‌ಬಂದ್ ಗ್ರಾಮದಲ್ಲಿ ನಡೆದಿದೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಆಗ್ನೇಯ ದೆಹಲಿಯ ಡಿಸಿಪಿ ರವಿ ಕುಮಾರ್‌ಸಿಂಗ್, 'ತಾಯಿ ಗೀತಾ ಅವರನ್ನು ನವೆಂಬರ್ 6ರ ಸಂಜೆ ಕೊಲೆ ಮಾಡಿದ್ದ ಆರೋಪಿ ಕೃಷ್ಣಕಾಂತ್ (31), ತನ್ನ ತಂದೆ ಸುರ್ಜಿತ್‌ ಸಿಂಗ್‌ ಅವರಿಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದ.

ತಂದೆ ಮನೆಗೆ ಬಂದ ನಂತರ ಕ್ಷಮೆ ಕೇಳಿದ್ದ ಆತ, ಮಹಡಿಗೆ ಹೋಗಿ ನೋಡುವಂತೆ ತಿಳಿಸಿದ್ದ' ಎಂದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಗೀತಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದರು.

'ಆರೋಪಿ ಕೃಷ್ಣಕಾಂತ್ ಹಾಗೂ ಸಹೀಲ್ ಬೋಲಿ ಎಂಬವರು ಮೃತ ಮಹಿಳೆ ಗೀತಾ ಮತ್ತು ಸುರ್ಜಿತ್‌ ಸಿಂಗ್‌ ದಂಪತಿಯ ಮಕ್ಕಳು. ಸಹೀಲ್ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ನಿರುದ್ಯೋಗಿಯಾಗಿರುವ ಕೃಷ್ಣಕಾಂತ್‌ ಮಾದಕ ವ್ಯಸನಿ. ಆದಾಗ್ಯೂ, ಆತ (ಕೃಷ್ಣಕಾಂತ್‌) ಉದ್ಯೋಗಕ್ಕಾಗಿ ಕೆನಡಾಗೆ ಹೋಗುವುದಾಗಿ ಮನೆಯವರಿಗೆ ಹೇಳಿದ್ದ. ಆದರೆ, ಮಕ್ಕಳಿಬ್ಬರೂ ಅವಿವಾಹಿತರಾಗಿದ್ದ ಕಾರಣ, ಮೊದಲು ಮದುವೆಯಾಗುವಂತೆ ಮನೆಯವರು ಹೇಳಿದ್ದರು' ಎಂದು ತಿಳಿಸಿದ್ದಾರೆ.

'ಕೃತ್ಯ ನಡೆದ ದಿನ ತಾಯಿ ಹಾಗೂ ಆರೋಪಿ ಮಗ ಮಾತ್ರ ಮನೆಯಲ್ಲಿದ್ದರು. ಕೆನಡಾಗೆ ಹೋಗುವ ವಿಚಾರವಾಗಿ, ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಆವೇಶಕ್ಕೊಳಗಾದ ಆರೋಪಿ, ತಾಯಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದ' ಎಂದು ಡಿಸಿಪಿ ವಿವರಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಸ್ಥಳದಲ್ಲೇ ಬಂಧಿಸಲಾಗಿದೆ ಎಂದೂ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries