HEALTH TIPS

'ಮೇಲ್ಜಾತಿ'ಗೆ ಬುಡಕಟ್ಟು ವ್ಯವಹಾರಗಳ ಖಾತೆ: ಸಚಿವ ಸುರೇಶ್ ಗೋಪಿ ಹೇಳಿಕೆ ವಿವಾದ

ನವದೆಹಲಿ/ತಿರುವನಂತಪುರ: 'ಬುಡಕಟ್ಟು ವ್ಯವಹಾರಗಳ ಖಾತೆಯನ್ನು ಮೇಲ್ಜಾತಿಯವರು ವಹಿಸಬೇಕು' ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ, ನಟ ಸುರೇಶ್ ಗೋಪಿ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ನವದೆಹಲಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, 'ಬುಡಕಟ್ಟು ವ್ಯವಹಾರಗಳ ಖಾತೆಯನ್ನು ಮೇಲ್ಜಾತಿಯವರು ವಹಿಸಿದರೆ ಮಾತ್ರ ಬುಡಕಟ್ಟಿನ ಕಲ್ಯಾಣದಲ್ಲಿ ನಿಜವಾದ ಪ್ರಗತಿ ಸಾಧ್ಯ' ಎಂದು ಹೇಳಿದ್ದಾರೆ.

'ಬುಡಕಟ್ಟು ವ್ಯವಹಾರಗಳ ಸಚಿವರನ್ನಾಗಿ ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಮಾತ್ರ ಆಯ್ಕೆ ಮಾಡುವುದು ನಮ್ಮ ದೇಶದ ಶಾಪವಾಗಿದೆ' ಎಂದು ಅವರು ಹೇಳಿದ್ದಾರೆ.

'ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಹೊರಗಿನವರನ್ನು ನೇಮಿಸಬೇಕು ಎಂಬುದು ನನ್ನ ಆಕಾಂಕ್ಷೆಯಾಗಿದೆ. ಬ್ರಾಹ್ಮಣ ಅಥವಾ ನಾಯ್ದು ನಿಭಾಯಿಸಲಿ. ಆಗ ಮಾತ್ರ ಗಮನಾರ್ಹ ಬದಲಾವಣೆ ಸಾಧ್ಯ. ಅಂತೆಯೇ ಮುಂದುವರಿದ ಸಮುದಾಯಗಳ ಖಾತೆಗಳನ್ನು ಬುಡಕಟ್ಟು ಜನಾಂಗದವರಿಗೆ ನೀಡಬೇಕು. ನಮ್ಮ ಪ್ರಜಾಪ್ರಭುತ್ವದಲ್ಲಿ ಅಂತಹ ಬದಲಾವಣೆ ಆಗಬೇಕು' ಎಂದು ಅವರು ಹೇಳಿದ್ದಾರೆ.

'ಬುಡಕಟ್ಟು ವ್ಯವಹಾರಗಳ ಖಾತೆಯನ್ನು ತಮಗೆ ನೀಡಬೇಕು ಎಂದು ಪ್ರಧಾನಿ ಅವರಿಗೆ ಮನವಿ ಮಾಡಿದ್ದೇನೆ. ಆದರೆ ಖಾತೆ ಹಂಚಿಕೆಗಳಿಗೆ ಕೆಲವೊಂದು ರೂಢಿಗಳಿವೆ' ಎಂದು ತ್ರಿಶೂರ್‌ನ ಸಂಸದ ಸುರೇಶ್ ಗೋಪಿ ಹೇಳಿದ್ದಾರೆ.

ಸುರೇಶ್ ಗೋಪಿ ಹೇಳಿಕೆ ವಿರುದ್ಧ ಕೇರಳದ ಎಡಪಕ್ಷಗಳ ನಾಯಕರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. 'ಜಾತಿ ವ್ಯವಸ್ಥೆ'ಯ ನಾಯಕನನ್ನು ಕೂಡಲೇ ಸಂಪುಟದಿಂದ ಕೆಳಗಿಳಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ಸುರೇಶ್ ಗೋಪಿ ರಾಜೀನಾಮೆಯನ್ನು ಬಯಸಿದ್ದು, ಈ ಕುರಿತು ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಬೇಡಿಕೆ ಇಟ್ಟಿದ್ದಾರೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries