HEALTH TIPS

ಬಾವಿ ಪುನಶ್ಚೇತನಕ್ಕೆ ಮಸೀದಿ ಸಮಿತಿಯಿಂದ ಆಕ್ಷೇಪ: ಕೋರ್ಟ್‌ಗೆ ಉ. ಪ್ರದೇಶ ಸರ್ಕಾರ

ನವದೆಹಲಿ: ಸಂಭಲ್‌ನ ಪುರಾತನ ಬಾವಿಯ ಪುನಶ್ಚೇತನಕ್ಕೆ ಶಾಹಿ ಜಾಮಾ ಮಸೀದಿ ಸಮಿತಿಯು ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಉತ್ತರ ಪ್ರದೇಶವು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಬಾವಿಯನ್ನು ಸ್ಥಳೀಯರು 'ಧರಣಿ ವರಾಹ ಕೂಪ' ಎಂದು ಕರೆಯುತ್ತಾರೆ. ಬಾವಿಯು ವಿವಾದಿತ ಸ್ಥಳದ ಹೊರಗೆ, ಸಾರ್ವಜನಿಕ ಪ್ರದೇಶದಲ್ಲಿದ್ದರೂ ಸಮಿತಿಯು ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಹೇಳಿದೆ.

ಸಂಭಲ್‌ ಜಿಲ್ಲೆಯಲ್ಲಿರುವ ಸಾಂಸ್ಕೃತಿಕವಾಗಿ ಪ್ರಾಮುಖ್ಯತೆ ಪಡೆದಿರುವ ಸ್ಥಳಗಳು ಮತ್ತು 19 ಪ್ರಮುಖ ಬಾವಿಗಳ ಪುನಶ್ಚೇತನಕ್ಕೆ ಜಿಲ್ಲಾಡಳಿತವು ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದೆ. ಪುನಶ್ಚೇತನಕ್ಕೆ ಅಡ್ಡಿಪಡಿಸುವುದು ಅಕ್ರಮ ಮಾತ್ರ ಅಲ್ಲ, ಪ್ರದೇಶದ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಕೆಡಕು ಉಂಟುಮಾಡುವ ಕೆಲಸವಾಗಿದೆ ಎಂದು ಸರ್ಕಾರ ವರದಿಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries