HEALTH TIPS

ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ. ದಕ್ಷಿಣ ಕೇರಳದಲ್ಲಿ ಇಂದು ಮಿಲ್ಮಾ ಹಾಲು ಪೂರೈಕೆಯಲ್ಲಿ ವ್ಯತ್ಯಯ:

ತಿರುವನಂತಪುರಂ: ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಆಲಪ್ಪುಳ ಸೇರಿದಂತೆ ದಕ್ಷಿಣ ಭಾಗದಲ್ಲಿ ಇಂದು ಮಿಲ್ಮಾ ಹಾಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ತಿರುವನಂತಪುರಂ ಪ್ರಾದೇಶಿಕ ಯೂನಿಯನ್ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಘೋಷಿಸಿದ ನಂತರ ಹಾಲು ಪೂರೈಕೆ ಬಿಕ್ಕಟ್ಟಿಗೊಳಗಾಯಿತು. 

ನಿವೃತ್ತ ಎಂಡಿ ಡಾ. ಪಿ. ಮುರಳಿ ಅವರ ಸೇವಾವಧಿಯನ್ನು ವಿಸ್ತರಿಸಿರುವ ಸರ್ಕಾರದ ಕ್ರಮ ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ. ನಿವೃತ್ತಿಯ ನಂತರವೂ ಎಲ್ಲಾ ಸವಲತ್ತುಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ಅವರಿಗೆ ಅವಕಾಶ ನೀಡುವುದು ಸರಿಯಲ್ಲ ಎಂಬ ನಿಲುವನ್ನು ಒಂದು ವರ್ಗದ ನೌಕರರು ತೆಗೆದುಕೊಂಡರು.

ನಿರ್ಧಾರವನ್ನು ಹಿಂಪಡೆಯದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಿಐಟಿಯು ಮತ್ತು ಐಎನ್‍ಟಿಯುಸಿ ಸೇರಿದಂತೆ ಒಕ್ಕೂಟಗಳು ಎಚ್ಚರಿಸಿವೆ. ಏತನ್ಮಧ್ಯೆ, ಸಮಸ್ಯೆಯನ್ನು ಪರಿಹರಿಸಲು ಅಧ್ಯಕ್ಷರು ಇಂದು ಮಧ್ಯಾಹ್ನ ಸಭೆ ನಡೆಸಿದ್ದು ಮಾಹಿತಿ ಲಭ್ಯವಾಗಿಲ್ಲ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries