HEALTH TIPS

ಅಮರನಾಥ ಯಾತ್ರೆ: ಉಗ್ರರ ವಿರುದ್ಧ 'ಆಪರೇಷನ್‌ ಬಿಹಾಲಿ' ಆರಂಭ

ಶ್ರೀನಗರ: ಅಮರನಾಥ ಯಾತ್ರೆ ಆರಂಭಕ್ಕೆ ಇನ್ನೊಂದು ವಾರ ಬಾಕಿ ಉಳಿದಿದ್ದು, ಭದ್ರತಾ ಪಡೆಗಳು ಉಧಂಪುರ ಜಿಲ್ಲೆಯ ಬಸಂತಗಡ ಪ್ರದೇಶದಲ್ಲಿ ಗುರುವಾರ ಉಗ್ರರ ವಿರುದ್ಧ 'ಆಪರೇಷನ್‌ ಬಿಹಾಲಿ' ಕಾರ್ಯಾಚರಣೆ ನಡೆಸಿತು. 

ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಜಂಟಿ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.

ಬಸಂತಗಡ ಪ್ರದೇಶದ ಬಿಹಾಲಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿರುವುದರಿಂದ 'ಆಪರೇಷನ್‌ ಬಿಹಾಲಿ' ಎಂದು ಹೆಸರಿಡಲಾಗಿದೆ.

'ನಾಲ್ವರು ಉಗ್ರರ ತಂಡವೊಂದನ್ನು ಭದ್ರತಾ ಪಡೆ ಸುತ್ತುವರೆದಿದೆ. ಪ್ರತಿಕೂಲ ಹವಾಮಾನವು ಕಾರ್ಯಾಚರಣೆಗೆ ತುಸು ಅಡ್ಡಿಯಾಗಿದೆ' ಎಂದು ಜಮ್ಮು ವಲಯದ ಐಜಿಪಿ ಭೀಮ್‌ ಸೇನ್‌ ಖಚಿತಪಡಿಸಿದ್ದಾರೆ.

ಬಿಹಾಲಿ ಪ್ರದೇಶದ ಮೂಲಕ ಅಮರನಾಥ ಯಾತ್ರಿಕರು ಹಾದು ಹೋಗುತ್ತಾರೆ. ಅರಣ್ಯ, ಗುಡ್ಡಗಳಿಂದ ಆವೃತವಾಗಿರುವ ಈ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಿದ್ದು, ಯಾತ್ರಿಕರ ಸುರಕ್ಷತೆಗೆ ಭದ್ರತಾ ಪಡೆಗಳು ಈ ಬಾರಿ ಹೆಚ್ಚುವರಿ ಕ್ರಮಗಳನ್ನು ಕೈಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries