HEALTH TIPS

ತಮಿಳುನಾಡು ಎಡಿಜಿಪಿ ಅಮಾನತು ಪ್ರಕರಣ ಸಿಬಿ-ಸಿಐಡಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ತಮಿಳುನಾಡು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್‌.ಎಂ.ಜಯರಾಮ್ ಅವರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಮದ್ರಾಸ್‌ ಹೈಕೋರ್ಟ್ ನೀಡಿದ್ದ ಮೌಖಿಕ ಆದೇಶವನ್ನು ವಜಾ ಮಾಡಿರುವ ಸುಪ್ರೀಂ ಕೋರ್ಟ್‌, ಅಧಿಕಾರಿ ವಿರುದ್ಧದ ತನಿಖೆಯನ್ನು ಸಿಬಿ-ಸಿಐಡಿಗೆ ವರ್ಗಾವಣೆ ಮಾಡಿದೆ.

ಯುವತಿಯೊಬ್ಬರನ್ನು ಅಪಹರಿಸಲಾಗಿದ್ದ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಜಯರಾಮ್‌ ಅವರನ್ನು ತಮಿಳುನಾಡು ಸರ್ಕಾರ ಅಮಾನತು ಮಾಡಿತ್ತು. ಇದನ್ನು ಜಯರಾಮ್ ಪ್ರಶ್ನಿಸಿದ್ದರು. ಸರ್ಕಾರದ ಕ್ರಮಕ್ಕೆ ಬುಧವಾರ ಸುಪ್ರೀಂ ಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿತ್ತು.

ನ್ಯಾಯಮೂರ್ತಿಗಳಾದ ಉಜ್ಜಲ್‌ ಭುಯಾನ್ ಮತ್ತು ಮನ್‌ಮೋಹನ್ ಸಿಂಗ್ ಅವರು ಇದ್ದ ಪೀಠದಲ್ಲಿ ಗುರುವಾರ ಜಯರಾಮ್‌ ಅವರ ಅರ್ಜಿ ವಿಚಾರಣೆ ಮುಂದುವರೆದಾಗ, ತನಿಖೆ ಮುಗಿಯುವವರೆಗೂ ಅಮಾನತು ಮುಂದುವರೆಯಬೇಕೆಂದು ಬಯಸುವುದಾಗಿ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿತು.

ತಮಿಳುನಾಡು ಸರ್ಕಾರದ ಪರ ವಕೀಲ ಸಿದ್ದಾರ್ಥ ದವೆ ಅವರು, 'ಎಡಿಜಿಪಿ ಜಯರಾಮ್ ಅವರ ವಿರುದ್ಧ ಅಪಹರಣ ಪ್ರಕರಣವಷ್ಟೇ ಅಲ್ಲದೇ ಮತ್ತಿತರ ಆರೋಪಗಳೂ ಇವೆ. ನಿಯಮಗಳ ಅನ್ವಯವೇ ಅಮಾನತು ಮಾಡಲಾಗಿದೆ' ಎಂದು ವಾದ ಮಂಡಿಸಿದರು.

ಈ ವೇಳೆ, ಮತ್ತೊಂದು ಪೀಠಕ್ಕೆ ಅಪಹರಣ ಪ್ರಕರಣದ ವಿಚಾರಣೆ ವರ್ಗಾಯಿಸುವಂತೆಯೂ ಹೈಕೋರ್ಟ್ ನ್ಯಾಯಮೂರ್ತಿಗೆ ಪೀಠವು ಸೂಚಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries