HEALTH TIPS

ಬಕ್ರೀದ್: ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನಾಳೆ ರಜೆ-ಸರ್ಕಾರದಿಂದ ತರಾತುರಿಯ ನಿರ್ಧಾರ

ತಿರುವನಂತಪುರಂ: ಬಕ್ರೀದ್ ಆಚರಣೆಯ ಅಂಗವಾಗಿ ನಾಳೆ( ಶುಕ್ರವಾರ) ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ತರಾತುರಿಯ ಹಠಾತ್ ರಜೆ ಘೋಷಿಸಲಾಗಿದೆ.

ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಮತ್ತು ಉನ್ನತ ಶಿಕ್ಷಣ ಸಚಿವೆ ಡಾ. ಆರ್. ಬಿಂದು ಫೇಸ್‌ಬುಕ್ ಪೋಸ್ಟ್ ಮೂಲಕ ಇದನ್ನು ಪ್ರಕಟಿಸಿದ್ದಾರೆ.

ಸರ್ಕಾರ ಈ ಹಿಂದೆ ಶನಿವಾರ ಮಾತ್ರ ರಜೆ ಎಂದು ಆದೇಶಿಸಿತ್ತು. ಇದರ ನಂತರ ನಾಳೆ ಕೂಡ ರಜೆ ಇರುತ್ತದೆ ಎಂದು ಘೋಷಿಸಲಾಯಿತು.

 ನಾಳೆ ರಜೆ ನೀಡದಿರುವುದರಿಂದ ಪ್ರತಿಪಕ್ಷ ತೀವ್ರ ಅತೃಪ್ತಿ ವ್ಯಕ್ತಪಡಿಸಿತ್ತು. ಜೊತೆಗೆ ನಿಲಂಬೂರ್ ಉಪಚುನಾವಣೆ ಹಿನ್ನೆಲೆಯಲ್ಲಿ ಮತಗಳಿಗೆ ಕತ್ತರಿಸುವುದು ಬೀಳುವ ಭಯದಿಂದ ಸ್ವತಃ ಮುಖ್ಯಮಂತ್ರಿ ಹಠಾತ್ ನಿರ್ಣಯ ಬದಲಾಯಿಸಿದರು. ಆದರೆ ಇತರ ಸರ್ಕಾರಿ ಕಚೇರಿಗಳಿಗೆ ಇನ್ನೂ ರಜೆ ಘೋಷಿಸಿಲ್ಲ.ಇಂದು ರಾತ್ರಿ ಮೊದಲಿಗೆ ಉನ್ನತ ಶಿಕ್ಷಣ ಇಲಾಖೆ ಮತ್ತು ಬಳಿಕ ಸಾಮಾನ್ಯ ಶಿಕ್ಷಣ ಇಲಾಖೆ ರಜೆ ಘೋಷಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries