HEALTH TIPS

ಮಹತ್ವಾಕಾಂಕ್ಷೆಯೇ ಮೈವೆತ್ತ ಭಾರತ..ಶುಕ್ಲಾಗೆ ಅಂತರಿಕ್ಷದಿಂದ ದೇಶ ಕಂಡಿದ್ದು ಹೀಗೆ

ನವದೆಹಲಿ: 'ಅಂತರಿಕ್ಷದಿಂದ ಕಣ್ಣು ಹಾಯಿಸಿದಾಗ, ಭಾರತವು ಮಹತ್ವಾಕಾಂಕ್ಷೆಯೇ ಮೈವೆತ್ತಿದಂತೆ ಕಾಣುತ್ತದೆ. ಯಾವುದೇ ಅಂಜಿಕೆ ಇಲ್ಲದ; ಆತ್ಮವಿಶ್ವಾಸ ಹಾಗೂ ಹೆಮ್ಮೆಯಿಂದ ಬೀಗುವ ದೇಶವಾಗಿ ಗಮನ ಸೆಳೆಯುತ್ತದೆ' ಎಂದು ಗಗನಯಾನಿ ಶುಭಾಂಶು ಶುಕ್ಲಾ ಭಾನುವಾರ ಹೇಳಿದ್ದಾರೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 'ಆಕ್ಸಿಯಂ-4' ಬಾಹ್ಯಾಕಾಶ ಕಾರ್ಯಕ್ರಮದ ಗಗನಯಾನಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.

ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳು ಭೂಮಿಯತ್ತ ಸೋಮವಾರ ಮರುಪ್ರಯಾಣ ಕೈಗೊಳ್ಳಲಿದ್ದಾರೆ. ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಮಂಗಳವಾರ ಇಳಿಯುವ ಸಾಧ್ಯತೆ ಇದೆ.

'ಈ ಅಂತರಿಕ್ಷ ಯಾನ ನನ್ನಲ್ಲಿ ಅಲೌಕಿಕ ಭಾವನೆ ಮೂಡಿಸುತ್ತಿದೆ. ನನ್ನ ಪಾಲಿಗೆ ಇದೊಂದು ಅದ್ಭುತ ಪಯಣ. ನಾನು ಅಪಾರ ನೆನಪುಗಳು ಹಾಗೂ ಕಲಿಕೆಯೊಂದಿಗೆ ಭೂಮಿಯತ್ತ ಮರು ಪಯಣ ಆರಂಭಿಸುತ್ತಿದ್ದೇನೆ. ಇವುಗಳನ್ನು ನನ್ನ ದೇಶವಾಸಿಗಳೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿರುವೆ' ಎಂದು ಶುಕ್ಲಾ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries