HEALTH TIPS

ನಿರುದ್ಯೋಗಿ ತಾಯಂದಿರಿಗೆ ವಾರ್ಷಿಕ ₹ 40 ಸಾವಿರ: ಸಿಕ್ಕಿಂ ಸರ್ಕಾರದಿಂದ ಹೊಸ ಯೋಜನೆ

ಗ್ಯಾಂಗ್ಟಾಕ್: ಕರ್ನಾಟಕದಲ್ಲಿ ಪದವಿ ಪೂರ್ಣಗೊಂಡ ನಿರುದ್ಯೋಗಿ ಯುವಕರಿಗೆ 'ಯುವ ನಿಧಿ' ಅಡಿಯಲ್ಲಿ ಮಾಸಿಕ ₹ 3 ಸಾವಿರ ನೀಡಲಾತ್ತಿದೆ. ಇದೀಗ ಇಂತಹದೆ ಯೋಜನೆಯೊಂದನ್ನು ಸಿಕ್ಕಿಂ ಸರ್ಕಾರ ಕೂಡ ಆರಂಭಿಸಿದೆ. 

ನಿರುದ್ಯೋಗಿ ತಾಯಂದಿರಿಗೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ 'ಆಮ ಸಶಕ್ತಿಕರಣ್‌ ಯೋಜನೆ'ಯನ್ನು ಸಿಕ್ಕಿಂ ಸರ್ಕಾರ ಆರಂಭಿಸಿದೆ.

ಈ ಯೋಜನೆ ಅಡಿಯಲ್ಲಿ ನಿರುದ್ಯೋಗಿ ತಾಯಂದಿರಿಗೆ ವಾರ್ಷಿಕ ₹ 40 ಸಾವಿರ ನೀಡಲಾಗುತ್ತದೆ.

ಭಾನುವಾರ ಸಿಕ್ಕಿಂನ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು 32 ಸಾವಿರ ನಿರುದ್ಯೋಗಿ ಮಹಿಳೆಯರಿಗೆ ತಲಾ ₹20 ಸಾವಿರ ಮೊತ್ತದ ಚೆಕ್‌ ವಿತರಣೆ ಮಾಡಿದ್ದಾರೆ.

ಸಿಕ್ಕಿಂನಲ್ಲಿ ಫಲವತ್ತತೆ ದರ ಕುಸಿಯುತ್ತಿರುವ ಕಾರಣ, ಅಲ್ಲಿನ ಜನರು ಹೆಚ್ಚು ಮಕ್ಕಳು ಮಾಡಿಕೊಳ್ಳಲು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.

ಭ್ರಷ್ಟಾಚಾರ ಆರೋಪದಲ್ಲಿ ಜೈಲು ಪಾಲಾಗಿದ್ದ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ಅವರು ಜೈಲಿನಿಂದ ಬಿಡುಗಡೆಯಾದ ದಿನವಾದ ಆಗಸ್ಟ್‌ 10 ಅನ್ನು 'ಆಮ ಸನ್ಮಾನ್‌ ದಿವಸ್‌' ಎಂದು ಆಚರಣೆ ಮಾಡಲು ಸಿಕ್ಕಿಂ ಸರ್ಕಾರ ನಿರ್ಧರಿಸಿದೆ. 8 ವರ್ಷಗಳ ಹಿಂದೆ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries