HEALTH TIPS

ಗೋಕುಲಂ ಗೋಶಾಲೆಯಲ್ಲಿ ಮೊಳಗಿದ ನವಗ್ರಹ ಕೀರ್ತನೆಗಳು

ಕಾಸರಗೋಡು: ಬೇಕಲದ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ವತಿಯಿಂದ ನಡೆಯುತ್ತಿರುವ ಐದನೇ ದೀಪಾವಳಿ ಸಂಗೀತೋತ್ಸವದ ಎರಡನೇ ದಿನ ಮಂಗಳವಾರ ಗೋಶಾಲೆ ಸಂಸ್ಥಾಪಕ ವಿಷ್ಣುಪ್ರಸಾದ್ ಹೆಬ್ಬಾರ್ ರಚಿಸಿದ ನವಗ್ರಹ ಕೀರ್ತನೆಗಳನ್ನು ಕರ್ನಾಟಿಕ್ ಸಂಗೀತ ತಜ್ಞ ವೆಳ್ಳಿಕೋತ್ ವಿಷ್ಣು ಭಟ್ ಬಿಡುಗಡೆ ಮಾಡಿ ಹಾಡಿದರು. ಒಂಭತ್ತು ಗ್ರಹಗಳ ಮೇಲೆ ಲಾವಂಗಿ, ಚಕ್ರವಾಕಂ, ಆನಂದ ಭೈರವಿ, ಧನ್ಯಾಸಿ, ಆರಾಭಿ, ಹಂಸಧ್ವನಿ, ವಸಂತ, ಶ್ರೀ ರಾಗಂ ಮತ್ತು ಹಂಸನಾದಂಗಳಲ್ಲಿ ಒಂಬತ್ತು ಕೃತಿಗಳನ್ನು ರಚಿಸಿದ್ದಾರೆ. ಪಕ್ಕ ವಾದ್ಯದಲ್ಲಿ ವೀಣೆಯಲ್ಲಿ ಶ್ರೀಲತಾ ನಿಕ್ಷಿತ್, ಪಿಟೀಲಿನಲ್ಲಿ ಸುನೀತಾ ಹರಿಶಂಕರ್, ಮೃದಂಗದಲ್ಲಿ ತ್ರಿಪುಣಿತುರ ರಾಜ್ ನಾರಾಯಣನ್, ಘಟಂನಲ್ಲಿ ರೋಹಿತ್ ಪ್ರಸಾದ್, ಮೋರ್ಸಿಂಗ್ ನಲ್ಲಿ ಗೋಪಿ ನಾದಾಲಯ ಸಹಕರಿಸಿದರು. 


ಎರಡನೇ ದಿನ ಚೆನ್ನೈಯ ಅನಸೂಯಾ ಪಾಠಕ್, ಸರ್ವೇಶ್ ದೇವಸ್ಥಲಿ, ಅದಿತಿ ಪ್ರಹ್ಲಾದ್, ಅಭಿಜ್ಞಾ ರಾವ್, ಶಿಲ್ಪಾ ಪಂಚ ಮತ್ತು ಅಜಯ್ ಮುಕ್ಕುಂ ಚೆನ್ನೈ, ಸ್ನೇಹಾ ಗೋಮತಿ, ವಿಧಾಶ್ರೀ ಬೆಳ್ಳಾರೆ, ಶೃತಿ ವಾರಿಜಾಕ್ಷನ್, ಶ್ರೇಯಾ ಕೊಳತ್ತಾಯ, ಕಾಂಚನ ಸಹೋದರಿಯರು ನಂದಿ ಮಂಟಪದಲ್ಲಿ ಗಾನಾರ್ಚನೆ ಮಾಡಿದ್ದಾರೆ.

ದೀಪಾವಳಿ ಸಂಗೀತೋತ್ಸವದಲ್ಲಿ ಇಂದು (ಅ.22) : 

ಇಂದು ಗೋಕುಲಂ ಗೋಶಾಲಾ ನಂದಿ ಮಂಟಪದಲ್ಲಿ ಅಭಿಜಿತ್ ಟಿ.ಪಿ., ಓಚಿತ್ಯ, ದ್ವಾರಂ ಲಕ್ಷ್ಮೀ ತಿರುಪತಿ, ಅರ್ಜುನ್ ಗಣೇಶ್, ಲಾವಣ್ಯ ರೂಪಕಲಾ, ಆಶಾ ಪುರವಂಕರ, ಮೇಘನಾ ಪಾಣಾಜೆ, ಧನ್ಯ ದಿನೇಶ್ ರುದ್ರ ಪಟ್ಟಣಂ, ಕೃತಿ ಭಟ್ ಚೆನ್ನಯ್ಯ ಅವರಿಂದ ಗಾಯನ ನಡೆಯಲಿದೆ. ಚಾರುಲತಾ ಚಂದ್ರಶೇಖರ್ ಚೆನ್ನೈ ಅವರಿಂದ ವೀಣಾ ಕಛೇರಿ ಹಾಗೂ ಶ್ರೀಧರ್ ಸಾಗರ್ ಅವರಿಂದ ಸ್ಯಾಕ್ಸೋಫೆÇೀನ್ ಗೋಷ್ಠಿ ನಡೆಯಲಿದೆ.

ಇಂದು ಸಂಜೆ 7 ಗಂಟೆಗೆ ಖ್ಯಾತ ಹಿನ್ನೆಲೆ ಗಾಯಕ ಅನೂಪ್ ಶಂಕರ್ ಅವರ ಭಕ್ತಿಗೀತೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries