HEALTH TIPS

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಕೆನಡಾ ಹೈಕಮಿಷನರ್‌

ನವದೆಹಲಿ: ಕೆನಡಾದ ನೂತನ ಹೈಕಮಿಷನರ್‌ ಕ್ರಿಸ್ಟೋಫರ್‌ ಕೂಟರ್‌ ಅವರು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ತಮ್ಮ ಪರಿಚಯ ಪತ್ರ ಹಸ್ತಾಂತರಿಸಿದರು. 

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್‌ ಸಿಂಗ್ ನಿಜ್ಜರ್‌ ಕೊಲೆ ಪ್ರಕರಣದಲ್ಲಿ ಭಾರತದ ಪಾತ್ರ ಇದೆ ಎಂದು ಕೆನಡಾ ಆರೋಪಿಸಿದ ಬಳಿಕ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಹಳಸಿತ್ತು.

ಈ ಆರೋಪಗಳ ಬೆನ್ನಲ್ಲೇ ಕೆನಡಾದಲ್ಲಿನ ತನ್ನ ಹೈಕಮಿಷನರ್‌ ಮತ್ತು ಇತರು ಐವರು ರಾಯಭಾರಿಗಳನ್ನು ಭಾರತ (ಕಳೆದ ವರ್ಷದ ಅಕ್ಟೋಬರ್‌ನಲ್ಲಿ) ಹಿಂದಕ್ಕೆ ಕರೆಸಿಕೊಂಡಿತ್ತು. ಅಲ್ಲದೆ ಭಾರತದಲ್ಲಿನ ಕೆನಡಾ ರಾಯಭಾರ ಕಚೇರಿಯ ಅಷ್ಟೇ ಸಂಖ್ಯೆಯ ರಾಯಭಾರಿಗಳನ್ನು ಹೊರಹಾಕಿತ್ತು.

ಈ ಬೆಳವಣಿಗೆಗಳು ನಡೆದ ವರ್ಷದ ಬಳಿಕ ಎರಡೂ ದೇಶಗಳ ಹೈಕಮಿಷನರ್‌ಗಳು ನೇಮಕಗೊಂಡು, ಅಧಿಕಾರವಹಿಸಿಕೊಂಡಿದ್ದಾರೆ. ಇದು ದ್ವಿಪಕ್ಷೀಯ ಸಂಬಂಧ ಸುಧಾರಿಸುತ್ತಿರುವುದರ ಸಂಕೇತ ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries