HEALTH TIPS

ಡಿಜಿಟಲ್ ಅರೆಸ್ಟ್ ದೇಶದ ಜನತೆಗೆ ಭಯಾನಕ ಬೆದರಿಕೆಯಾಗಿದೆ: IPSಗಳಿಗೆ ಮುರ್ಮು

ನವದೆಹಲಿ: ದೇಶದ ಜನತೆಗೆ ಡಿಜಿಟಲ್‌ ಅರೆಸ್ಟ್‌ ಅತ್ಯಂತ ಭಯಾನಕ ಬೆದರಿಕೆಯಾಗಿ ಮಾರ್ಪಟ್ಟಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಹೇಳಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಐಪಿಎಸ್‌ ಪ್ರೊಬೇಷನರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 'ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ.

ಅದನ್ನು ಉಳಿಸಲು ಮತ್ತು ವೇಗಗೊಳಿಸಲು ಹೆಚ್ಚಿನ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳ ಅಗತ್ಯವಿದೆ. ಯಾವುದೇ ರಾಜ್ಯ ಅಥವಾ ಪ್ರದೇಶದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ಹೂಡಿಕೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಆರ್ಥಿಕ ಪ್ರೋತ್ಸಾಹದಷ್ಟೇ ಪೊಲೀಸ್‌ ವ್ಯವಸ್ಥೆಯೂ ಮುಖ್ಯವಾಗಿದೆ' ಎಂದರು.

'ಕೇವಲ 10 ವರ್ಷಗಳ ಹಿಂದೆ 'ಡಿಜಿಟಲ್‌ ಅರೆಸ್ಟ್‌' ಎನ್ನುವ ಪದವನ್ನೇ ಅರ್ಥೈಸಿಕೊಳ್ಳಲು ಕಷ್ಟವಾಗಿತ್ತು. ಆದರೆ ಇಂದು ಭಯಾನಕ ಬೆದರಿಕೆಯಾಗಿ ಬದಲಾಗಿದೆ. ಇದು ಪೊಲೀಸ್ ವ್ಯವಸ್ಥೆಯ ಮೇಲೂ ಪರಿಣಾಮ ಬೀರಲಿದೆ. ದುರುದ್ದೇಶಕ್ಕೆ ತಂತ್ರಜ್ಞಾನವನ್ನು ಬಳಸುವವರಿಗಿಂತ ಎಐ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕಿಡಿಗೇಡಿಗಳಿಗಿಂತ ಹಲವು ಹೆಜ್ಜೆ ಮುಂದಿರಬೇಕು' ಎಂದು ತಿಳಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries