HEALTH TIPS

ಜಮ್ಮು-ಕಾಶ್ಮೀರ ವಿಚಾರ: ನೆಹರೂ- ಸರ್ದಾರ್ ಪಟೇಲರ ಪತ್ರ ಓದಿರಿ; ಖರ್ಗೆ

ನವದೆಹಲಿ: 'ಭಾರತದೊಂದಿಗೆ ಜಮ್ಮು ಮತ್ತು ಕಾಶ್ಮೀರವನ್ನು ಸೇರ್ಪಡೆಗೊಳಿಸುವ ಬಗ್ಗೆ ಜವಾಹರಲಾಲ್‌ ನೆಹರೂ ಅವರಿಗೆ ಸಹಮತ ಇರಲಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುದೀರ್ಘವಾದ ಉತ್ತರವನ್ನು ನೀಡಿದ್ದಾರೆ.

'ನೆಹರೂ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ನಡುವೆ ನಡೆದ ಪತ್ರ ವ್ಯವಹಾರಗಳು ಮತ್ತು ಅಂದಿನ ಕಾಲದ ಸದನದ ಚರ್ಚೆಗಳನ್ನು ಓದಿ ತಿಳಿದುಕೊಳ್ಳಿ. ಕಾಶ್ಮೀರವನ್ನು ಸ್ವತಂತ್ರ ದೇಶವನ್ನಾಗಿಸಬೇಕು ಎಂದವರು ಹಿಂದೂ ಮಹಾಸಭಾ ಮತ್ತು ಆರ್‌ಎಸ್‌ಎಸ್‌ನವರು' ಎಂದು ಖರ್ಗೆ ಅವರು ಮೋದಿ ಅವರುಗೆ ತಿರುಗೇಟು ನೀಡಿದ್ದಾರೆ.

'ಕಾಶ್ಮೀರದ ಮಹಾರಾದ ಹರಿ ಸಿಂಗ್‌ ಅವರ ಅತಿಥಿಗಳಾಗಿದ್ದವರು ವಿನಾಯಕ ದಾಮೋದರ್‌ ಸಾವರ್ಕರ್‌ ಮತ್ತು ಎಂ.ಎಸ್‌. ಗೋಲ್ವಾಲ್ಕರ್. ನೆಹರೂ ಅವರ ಬಗ್ಗೆ ಮೋದಿ ಅವರು ಆಡಿದ ಮಾತುಗಳು ಶುದ್ಧ ಸುಳ್ಳಿನಿಂದ ಕೂಡಿವೆ ಮತ್ತು ಖಂಡನೀಯವಾಗಿವೆ' ಎಂದು ತಮ್ಮ 'ಎಕ್ಸ್‌'ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries