HEALTH TIPS

ಇತಿಹಾಸದಿಂದ ಸರ್ದಾರ್ ಹೆಸರು ಅಳಿಸಲು 'ಕೈ' ಯತ್ನ: ಜೆ.ಪಿ.ನಡ್ಡಾ

 ವಡೋದರಾ: ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಹೆಸರನ್ನು ಇತಿಹಾಸದಿಂದ ಅಳಿಸಿಹಾಕಲು ಕಾಂಗ್ರೆಸ್‌ ಪಕ್ಷವು ಭಾರಿ ಶ್ರಮಪಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶನಿವಾರ ಆರೋಪಿಸಿದರು.

ಪಟೇಲ್‌ ಅವರ ಸ್ಮರಣಾರ್ಥವಾಗಿ ನಿರ್ಮಿಸಿದ 'ಏಕತಾ ಪ್ರತಿಮೆ'ಗೆ ತಗುಲಿದ ವೆಚ್ಚ ಮತ್ತು ಪ್ರತಿಮೆ ಸ್ಥಾಪನೆಯ ಅಗತ್ಯವನ್ನೂ ಕಾಂಗ್ರೆಸ್‌ ಪಕ್ಷವು ಪ್ರಶ್ನಿಸಿತ್ತು ಎಂದು ದೂರಿದರು.

ಅಟಲಾದರಾ ಗ್ರಾಮದಲ್ಲಿ ಆಯೋಜಿಸಿದ್ದ 'ಸರ್ದಾರ್‌ @150 ಏಕತಾ ಮೆರವಣಿಗೆ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಸರ್ದಾರ್‌ ಪಟೇಲ್‌ ಅವರ ಸ್ಮರಣೆ ಕಾಂಗ್ರೆಸ್‌ಗೆ ಇಷ್ಟವಿಲ್ಲ. ಇತಿಹಾಸದ ಪುಟಗಳಲ್ಲಿ 'ಭಾರತದ ಉಕ್ಕಿನ ಮನುಷ್ಯ'ನ ಹೆಸರು ದಾಖಲಾಗದಂತೆ ಕಾಂಗ್ರೆಸ್‌ ಸತತ ಪ್ರಯತ್ನಿಸಿತ್ತು. 1950ರಲ್ಲಿಯೇ ಅವರು ನಿಧನರಾದರೂ 1991ರಲ್ಲಿ ಅವರಿಗೆ ಭಾರತ ರತ್ನ ಪುರಸ್ಕಾರವನ್ನು ನೀಡಲಾಯಿತು' ಎಂದರು.

ಸ್ವಾತಂತ್ರ್ಯಾನಂತರ ಸರ್ದಾರ್‌ ಅವರು 562 ರಾಜಪ್ರಭುತ್ವಗಳನ್ನು ಯಶಸ್ವಿಯಾಗಿ ಭಾರತ ಒಕ್ಕೂಟಕ್ಕೆ ಸೇರಿಸಿದರು. ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಕಾಶ್ಮೀರ ವಿವಾದವನ್ನು ಇನ್ನುಷ್ಟು ಸಂಕೀರ್ಣಗೊಳಿಸಿದರು ಎಂದು ಹೇಳಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries